ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ರಾಜಕಾರಣದಲ್ಲಿ ಎದುರಾಗಿರುವ ಸದ್ಯದ ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ. ಸಚಿವ ಸ್ಥಾನಕ್ಕೆ ಯಾರೇ ಒತ್ತಾಯಿಸಿದರೂ ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ. ಯಡಿಯೂರಪ್ಪ ಅವರ ಮುಂದಾಳತ್ವದ ಸರ್ಕಾರ ಯುಗಾದಿವರೆಗೆ ಸುಸೂತ್ರವಾಗಿ ನಡೆಯಲಿದೆ. ಅದರ ನಂತರ ಏನಾಗಲಿದೆ ಎಂದು ಮತ್ತೆ ತಿಳಿಸುತ್ತೇನೆ’ ಎಂದರು.