<p><strong>ಧಾರವಾಡ:</strong>ಕರ್ನಾಟಕ ಕುಸ್ತಿಹಬ್ಬದ ಕೊನೆಯ ದಿನವಾದ ಮಂಗಳವಾರ ದೇಶದ ಪ್ರಮುಖ ಕುಸ್ತಿಪಟುಗಳು ಮತ್ತು ವಿದೇಶಿ ಪೈಲ್ವಾನರು ಅಖಾಡಕ್ಕೆ ಇಳಿಯಲಿದ್ದಾರೆ.</p>.<p>ಅದರಲ್ಲಿ ಅಂತರರಾಷ್ಟ್ರೀಯ ಪೈಲ್ವಾನ್ ಧಾರವಾಡ ತಾಲ್ಲೂಕಿನ ಸಿಂಗನಹಳ್ಳಿಯ ರಫೀಕ್ ಹೊಳಿ ಪ್ರಮುಖವಾದವರು. ತವರೂರ ಹುಡುಗನ ‘ದಂಗಲ್’ ನೋಡಲು ಕುಸ್ತಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.</p>.<p>ರಫೀಕ್ ಹೊಳಿ ವಿಶ್ವ ಚಾಂಪಿಯನ್ಷಿಪ್, 2016ರ ಕಾಮನ್ವೆಲ್ತ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ತವರೂರಿನ ಕುಸ್ತಿ ಅಭಿಮಾನಿಗಳ ಎದುರು ಪ್ರಶಸ್ತಿ ಗೆಲ್ಲಬೇಕೆನ್ನುವ ಛಲದಲ್ಲಿ ರಫೀಕ್ ಸಿಂಗನಹಳ್ಳಿಯಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಪುಣೆಯಲ್ಲಿ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.</p>.<p>ಮಂಗಳವಾರ ನಡೆಯುವ ಪಂದ್ಯದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಫೀಕ್ ‘ಮುಂದಿನ ದಿನಗಳಲ್ಲಿ ವಿಶ್ವ ಚಾಂಪಿಯನ್ಷಿಪ್ ಮತ್ತು ಒಲಿಂಪಿಕ್ಸ್ ಅರ್ಹತಾ ಟೂರ್ನಿಯ ಪಂದ್ಯಗಳಿವೆ. ಆದ್ದರಿಂದ ಇಲ್ಲಿನ ಕುಸ್ತಿ ಬಹುಮುಖ್ಯವಾದದ್ದು. ಇದೇ ವರ್ಷ ಟೋಕಿಯೊ ಒಲಿಂಪಿಕ್ಸ್ ಇದೆ; ಸದ್ಯಕ್ಕೆ ನನ್ನ ಪಾಲಿಗೆ ಧಾರವಾಡದ ಕುಸ್ತಿ ಹಬ್ಬವೇ ಒಲಿಂಪಿಕ್ಸ್. ಈ ಸವಾಲನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ’ ಎಂದರು.</p>.<p>ಗಣ್ಯರ ದಂಡು: ಕುಸ್ತಿಹಬ್ಬದಲ್ಲಿ ಸೋಮವಾರ ದೇಶದ ಹೆಸರಾಂತ ಕುಸ್ತಿಪಟುಗಳಾದ ಪಂಜಾಬಿನ ನಿವೃತ್ತ ಐಜಿಪಿ ಕರ್ತಾರ್ ಸಿಂಗ್, ಸುಭಾಸ್ ಮಲಿಕ್, ಧರ್ಮೇಂದ್ರ ಸಿಂಗ್ ಪಂದ್ಯಗಳನ್ನು ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong>ಕರ್ನಾಟಕ ಕುಸ್ತಿಹಬ್ಬದ ಕೊನೆಯ ದಿನವಾದ ಮಂಗಳವಾರ ದೇಶದ ಪ್ರಮುಖ ಕುಸ್ತಿಪಟುಗಳು ಮತ್ತು ವಿದೇಶಿ ಪೈಲ್ವಾನರು ಅಖಾಡಕ್ಕೆ ಇಳಿಯಲಿದ್ದಾರೆ.</p>.<p>ಅದರಲ್ಲಿ ಅಂತರರಾಷ್ಟ್ರೀಯ ಪೈಲ್ವಾನ್ ಧಾರವಾಡ ತಾಲ್ಲೂಕಿನ ಸಿಂಗನಹಳ್ಳಿಯ ರಫೀಕ್ ಹೊಳಿ ಪ್ರಮುಖವಾದವರು. ತವರೂರ ಹುಡುಗನ ‘ದಂಗಲ್’ ನೋಡಲು ಕುಸ್ತಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.</p>.<p>ರಫೀಕ್ ಹೊಳಿ ವಿಶ್ವ ಚಾಂಪಿಯನ್ಷಿಪ್, 2016ರ ಕಾಮನ್ವೆಲ್ತ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ತವರೂರಿನ ಕುಸ್ತಿ ಅಭಿಮಾನಿಗಳ ಎದುರು ಪ್ರಶಸ್ತಿ ಗೆಲ್ಲಬೇಕೆನ್ನುವ ಛಲದಲ್ಲಿ ರಫೀಕ್ ಸಿಂಗನಹಳ್ಳಿಯಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಪುಣೆಯಲ್ಲಿ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.</p>.<p>ಮಂಗಳವಾರ ನಡೆಯುವ ಪಂದ್ಯದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಫೀಕ್ ‘ಮುಂದಿನ ದಿನಗಳಲ್ಲಿ ವಿಶ್ವ ಚಾಂಪಿಯನ್ಷಿಪ್ ಮತ್ತು ಒಲಿಂಪಿಕ್ಸ್ ಅರ್ಹತಾ ಟೂರ್ನಿಯ ಪಂದ್ಯಗಳಿವೆ. ಆದ್ದರಿಂದ ಇಲ್ಲಿನ ಕುಸ್ತಿ ಬಹುಮುಖ್ಯವಾದದ್ದು. ಇದೇ ವರ್ಷ ಟೋಕಿಯೊ ಒಲಿಂಪಿಕ್ಸ್ ಇದೆ; ಸದ್ಯಕ್ಕೆ ನನ್ನ ಪಾಲಿಗೆ ಧಾರವಾಡದ ಕುಸ್ತಿ ಹಬ್ಬವೇ ಒಲಿಂಪಿಕ್ಸ್. ಈ ಸವಾಲನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ’ ಎಂದರು.</p>.<p>ಗಣ್ಯರ ದಂಡು: ಕುಸ್ತಿಹಬ್ಬದಲ್ಲಿ ಸೋಮವಾರ ದೇಶದ ಹೆಸರಾಂತ ಕುಸ್ತಿಪಟುಗಳಾದ ಪಂಜಾಬಿನ ನಿವೃತ್ತ ಐಜಿಪಿ ಕರ್ತಾರ್ ಸಿಂಗ್, ಸುಭಾಸ್ ಮಲಿಕ್, ಧರ್ಮೇಂದ್ರ ಸಿಂಗ್ ಪಂದ್ಯಗಳನ್ನು ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>