‘ನಾನು ಮೊದಲಿನಿಂದಲೂ ರಾಮನ ಭಕ್ತ. ಜಗತ್ತಿನಲ್ಲಿ ಶಾಂತಿ ಲಭಿಸಬೇಕು, ಲೋಕ ಕಲ್ಯಾಣವಾಗಬೇಕು ಎನ್ನುವ ಕಾರಕ್ಕಾಗಿ ರಾಮನಾಮ ಪಠಿಸಿ ಅದನ್ನು ಬರೆಯುತ್ತಾ ಬಂದಿದ್ದೇನೆ. ಅಂಚೆ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದಾಗ ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3ರಿಂದ 4 ಗಂಟೆ ತನಕ ರಾಮನಾಮ ಬರೆಯುತ್ತಿದ್ದೆ. ಆಗಲೂ, ಈಗಲೂ ದೇವರ ನಾಮ ಬರೆಯಲು ಅತ್ಯಂತ ಖುಷಿಯಾಗುತ್ತದೆ. ಸದಾ ಕಾಲಕ್ಕೂ ಇದು ಸಂತೋಷ ನೀಡುವ ಕೆಲಸ’ ಎಂದು ನಾರಾಯಣ ಅವರು ವಿನೀತರಾಗಿ ಹೇಳಿದರು.