<p>ಹುಬ್ಬಳ್ಳಿ: ಇಲ್ಲಿನ ಜೆ.ಸಿ. ನಗರದ ರಾಜಯೋಗ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಭಾನುವಾರ ಮಧ್ವಾಚಾರ್ಯರ ಮಹೋತ್ಸವ ಆಯೋಜಿಸಲಾಗಿತ್ತು.</p>.<p>ವೇದ ಪೀಠದ ಅಧ್ಯಕ್ಷ ಕಂಠಪಲ್ಲಿ ಆಚಾರ್ಯರು ಮಾತನಾಡಿ, ‘ಭಕ್ತಿಯಿಂದ ಮೋಕ್ಷ, ಮುಕ್ತಿ ಸಿಗುತ್ತದೆ. ಮೋಕ್ಷ ಎಂದರೆ ದುಃಖದಿಂದ ಬಿಡುಗಡೆ ಹೊಂದುವುದು ಎಂದು ಮದ್ವಾಚಾರ್ಯರು ತಿಳಿಸಿದ್ದಾರೆ’ ಎಂದು ಹೇಳಿದರು.</p>.<p>ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಗೌರವ ಉಪಾಧ್ಯಕ್ಷ ಹನುಮಂತ ಕೊಟಬಾಗಿ ಮಾತನಾಡಿ, ‘ವಿಶ್ವಗುರು ಮಧ್ವಾಚಾರ್ಯರ ಮಹೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ’ ಎಂದರು.</p>.<p>ಪ್ರಕಾಶ ಶೇಟ್ ಮಾತನಾಡಿ, ‘ನೆಮ್ಮದಿಯ ಜೀವನಕ್ಕೆ ಅಧ್ಯಾತ್ಮ ಬಹಳ ಅವಶ್ಯ. ಇಂತಹ ಅಧ್ಯಾತ್ಮದ ಮಹತ್ವ ಸಾರುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.</p>.<p>ಆನಂದ ವಿಷ್ಣು ಮಮದಾಪುರ ಅವರು, ಮಧ್ವಾಚಾರ್ಯರ ಐದು ತತ್ವಗಳ ಬಗ್ಗೆ ತಿಳಿಸಿದರು. ನಿರ್ಮಲ ಅಕ್ಕ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಇಲ್ಲಿನ ಜೆ.ಸಿ. ನಗರದ ರಾಜಯೋಗ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಭಾನುವಾರ ಮಧ್ವಾಚಾರ್ಯರ ಮಹೋತ್ಸವ ಆಯೋಜಿಸಲಾಗಿತ್ತು.</p>.<p>ವೇದ ಪೀಠದ ಅಧ್ಯಕ್ಷ ಕಂಠಪಲ್ಲಿ ಆಚಾರ್ಯರು ಮಾತನಾಡಿ, ‘ಭಕ್ತಿಯಿಂದ ಮೋಕ್ಷ, ಮುಕ್ತಿ ಸಿಗುತ್ತದೆ. ಮೋಕ್ಷ ಎಂದರೆ ದುಃಖದಿಂದ ಬಿಡುಗಡೆ ಹೊಂದುವುದು ಎಂದು ಮದ್ವಾಚಾರ್ಯರು ತಿಳಿಸಿದ್ದಾರೆ’ ಎಂದು ಹೇಳಿದರು.</p>.<p>ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಗೌರವ ಉಪಾಧ್ಯಕ್ಷ ಹನುಮಂತ ಕೊಟಬಾಗಿ ಮಾತನಾಡಿ, ‘ವಿಶ್ವಗುರು ಮಧ್ವಾಚಾರ್ಯರ ಮಹೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ’ ಎಂದರು.</p>.<p>ಪ್ರಕಾಶ ಶೇಟ್ ಮಾತನಾಡಿ, ‘ನೆಮ್ಮದಿಯ ಜೀವನಕ್ಕೆ ಅಧ್ಯಾತ್ಮ ಬಹಳ ಅವಶ್ಯ. ಇಂತಹ ಅಧ್ಯಾತ್ಮದ ಮಹತ್ವ ಸಾರುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.</p>.<p>ಆನಂದ ವಿಷ್ಣು ಮಮದಾಪುರ ಅವರು, ಮಧ್ವಾಚಾರ್ಯರ ಐದು ತತ್ವಗಳ ಬಗ್ಗೆ ತಿಳಿಸಿದರು. ನಿರ್ಮಲ ಅಕ್ಕ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>