<p><strong>ಅಣ್ಣಿಗೇರಿ:</strong> ಸಮಾಜಕ್ಕೆ ತತ್ವಜ್ಞಾನಿ ಮಹಾಯೋಗಿ ವೇಮನರು ತಮ್ಮದೇ ಆದ ಸೇವೆಯನ್ನು ಸಮರ್ಪಣೆ ಮಾಡಿ ಹೆಸರುವಾಸಿಯಾದವರು ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.</p>.<p>ಅವರು ಸ್ಥಳೀಯ ಎಸ್.ಎಂ.ಪಾಟೀಲ ಸಭಾಭವನದಲ್ಲಿ ಹಮ್ಮಿಕೊಂಡ ತತ್ವಜ್ಞಾನಿ ಮಹಾಯೋಗಿ ವೇಮನರ 611ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.</p>.<p>ಯುವಸಮೂಹ ಮಹಾಯೋಗಿ ವೇಮನರ ಆದರ್ಶ ತತ್ವ ಸಿದ್ಧಾಂತಗಳನ್ನು ಪಾಲಿಸಿ ತಮ್ಮ ಜೀವನ ರೂಪಿಸಿಕೊಳ್ಳಬೇಕು. ವೇಮನರು ಮಾನವೀಯ ಮೌಲ್ಯಗಳ ಕುರಿತು ಸಾಕಷ್ಟು ಪರಿಕಲ್ಪನೆಗಳನ್ನು ಕಂಡವರಾಗಿದ್ದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯೋಣ<br />ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ದೇಶಕ್ಕೆ<br />ತತ್ವಜ್ಞಾನಿ ವೇಮನರ ಕೊಡುಗೆ ಅನನ್ಯವಾಗಿದೆ. ವೇಮನರ ಪರಿಕಲ್ಪನೆಗಳು ಇಂದಿಗೂ ಜೀವಂತವಾಗಿವೆ. ವೇಮನರು ರಡ್ಡಿ ಸಮಾಜದವರಿಗೆ ಜ್ಞಾನದ ಪ್ರಣಾಳಿಕೆಯನ್ನು ನೀಡಿ ಮಹಾತತ್ವಜ್ಞಾನಿ ಎನಿಸಿದ್ದರು ಎಂದು<br />ಹೇಳಿದರು.</p>.<p>ಹನಮಂತಪ್ಪ ಕಡೇಮನಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಸಿ.ವಾಲಿ, ಡಾ.ಸುನಂದಾ ಬಳ್ಳೊಳ್ಳಿ, ಡಾ.ಕವಿತಾ ಮೇಟಿ ಮಹಾಯೋಗಿ ವೇಮನರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.</p>.<p>ಯೂತ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿನೋದ ಅಸೂಟಿ, ಸಮಾಜದ ಮುಖಂಡ ವ್ಹಿ.ಡಿ.ಅಂದಾನಿಗೌಡ್ರ, ಶಿವಣ್ಣ ಮಾಡಳ್ಳಿ, ಸಂಜೀವರಡ್ಡಿ ಅಮಡ್ಲ, ಪಾಂಡು ಬಿರಸಲ, ಶ್ರೀನಿವಾಸ ಮಂಕಣಿ, ರಾಜು ಜಂಗಲ<br />ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಣ್ಣಿಗೇರಿ:</strong> ಸಮಾಜಕ್ಕೆ ತತ್ವಜ್ಞಾನಿ ಮಹಾಯೋಗಿ ವೇಮನರು ತಮ್ಮದೇ ಆದ ಸೇವೆಯನ್ನು ಸಮರ್ಪಣೆ ಮಾಡಿ ಹೆಸರುವಾಸಿಯಾದವರು ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.</p>.<p>ಅವರು ಸ್ಥಳೀಯ ಎಸ್.ಎಂ.ಪಾಟೀಲ ಸಭಾಭವನದಲ್ಲಿ ಹಮ್ಮಿಕೊಂಡ ತತ್ವಜ್ಞಾನಿ ಮಹಾಯೋಗಿ ವೇಮನರ 611ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.</p>.<p>ಯುವಸಮೂಹ ಮಹಾಯೋಗಿ ವೇಮನರ ಆದರ್ಶ ತತ್ವ ಸಿದ್ಧಾಂತಗಳನ್ನು ಪಾಲಿಸಿ ತಮ್ಮ ಜೀವನ ರೂಪಿಸಿಕೊಳ್ಳಬೇಕು. ವೇಮನರು ಮಾನವೀಯ ಮೌಲ್ಯಗಳ ಕುರಿತು ಸಾಕಷ್ಟು ಪರಿಕಲ್ಪನೆಗಳನ್ನು ಕಂಡವರಾಗಿದ್ದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯೋಣ<br />ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ದೇಶಕ್ಕೆ<br />ತತ್ವಜ್ಞಾನಿ ವೇಮನರ ಕೊಡುಗೆ ಅನನ್ಯವಾಗಿದೆ. ವೇಮನರ ಪರಿಕಲ್ಪನೆಗಳು ಇಂದಿಗೂ ಜೀವಂತವಾಗಿವೆ. ವೇಮನರು ರಡ್ಡಿ ಸಮಾಜದವರಿಗೆ ಜ್ಞಾನದ ಪ್ರಣಾಳಿಕೆಯನ್ನು ನೀಡಿ ಮಹಾತತ್ವಜ್ಞಾನಿ ಎನಿಸಿದ್ದರು ಎಂದು<br />ಹೇಳಿದರು.</p>.<p>ಹನಮಂತಪ್ಪ ಕಡೇಮನಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಸಿ.ವಾಲಿ, ಡಾ.ಸುನಂದಾ ಬಳ್ಳೊಳ್ಳಿ, ಡಾ.ಕವಿತಾ ಮೇಟಿ ಮಹಾಯೋಗಿ ವೇಮನರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.</p>.<p>ಯೂತ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿನೋದ ಅಸೂಟಿ, ಸಮಾಜದ ಮುಖಂಡ ವ್ಹಿ.ಡಿ.ಅಂದಾನಿಗೌಡ್ರ, ಶಿವಣ್ಣ ಮಾಡಳ್ಳಿ, ಸಂಜೀವರಡ್ಡಿ ಅಮಡ್ಲ, ಪಾಂಡು ಬಿರಸಲ, ಶ್ರೀನಿವಾಸ ಮಂಕಣಿ, ರಾಜು ಜಂಗಲ<br />ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>