ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿ ಚಕ್ರವರ್ತಿಯ ಸ್ಮರಣೆ

Last Updated 4 ನವೆಂಬರ್ 2021, 13:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಮತಾ ಸೈನಿಕ ದಳ ಮತ್ತು ಭಾರತೀಯ ಮೂಲ ನಿವಾಸಿಗಳ ಒಕ್ಕೂಟದ ವತಿಯಿಂದ, ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಬಲಿ ಚಕ್ರವರ್ತಿ ಸ್ಮರಣೆ ಕಾರ್ಯಕ್ರಮ ನಡೆಯಿತು. ಚಕ್ರವರ್ತಿ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಸದಸ್ಯರು, ಬಳಿಕ ಜೈಕಾರ ಕೂಗಿದರು.

ಒಕ್ಕೂಟದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಪೆರೂರ ಮಾತನಾಡಿ, ‘ಉತ್ತಮ ಆಡಳಿತಗಾರ ಹಾಗೂ ಸುಸಂಸ್ಕೃತನಾಗಿದ್ದ ಮೂಲನಿವಾಸಿ ರಾಜ ಬಲೀಂದ್ರನನ್ನು ವೈದಿಕರು ಕೆಟ್ಟದಾಗಿ ಬಿಂಬಿಸಿದ್ದಾರೆ. ರಾಜನನ್ನುನೇರವಾಗಿ ಎದುರಿಸಲಾಗದ ವೈದಿಕರು, ಕುತಂತ್ರ ಮಾಡಿ ಬ್ರಾಹ್ಮಣ ಬಾಲಕನ ರೂಪದಲ್ಲಿ ರಾಜನನ್ನು ನಿರ್ಗತಿಕನ್ನಾಗಿ ಮಾಡಿದ ದಿನವೇ ದೀಪಾವಳಿ. ಈ ಸತ್ಯವನ್ನು ಮೂಲ ನಿವಾಸಿಗಳು ಅರಿಯಬೇಕಿದೆ’ ಎಂದರು.

ಸಮತಾ ಸೈನಿಕ ದಳದ ಉತ್ತರ ಕರ್ನಾಟಕ ಅಧ್ಯಕ್ಷ ಶಂಕರ ಅಜಮನಿ ಮಾತನಾಡಿ, ‘ಈ ದೇಶದ ಮೂಲನಿವಾಸಿ ಬೌದ್ಧ ರಾಜರನ್ನು ವೈದಿಕರು ನಿರ್ನಾಮ ಮಾಡಿ ವೈದಿಕ ಧರ್ಮವನ್ನು ಸ್ಥಾಪಿಸಿದ್ದಾರೆ. ಬೌದ್ದ ರಾಜರನ್ನು ಕೊಂದ ದಿನವನ್ನೇ ವಿವಿಧ ಹಬ್ಬಗಳಾಗಿ ಆಚರಿಸಲಾಗುತ್ತಿದೆ. ದೇಶದ ಹಲವೆಡೆ ಇರುವ ಪ್ರಸಿದ್ಧ ದೇವಾಲಯಗಳು ಹಿಂದೆ ಬೌದ್ಧ ವಿಹಾರಗಳಾಗಿದ್ದವು. ಶೋಷಿತ ಸಮುದಾಯದವರು ಶಿಕ್ಷಣ ಪಡೆದು ಜಾಗೃತರಾದ ಬಳಿಕ, ಇತಿಹಾಸದಲ್ಲಿ ಹುದುಗಿದ್ದ ಸತ್ಯಗಳು ಹೊರಬರುತ್ತಿವೆ’ ಎಂದು ಹೇಳಿದರು.

ರೇಣುಕಾ ವಂದಾಲ, ಮಲ್ಲಿಕಾರ್ಜುನ ಬಿಳಾರ, ನರಸಿಂಹ ಪಾಲವಾಯಿ, ಉಮೇಶ ಚಲವಾದಿ, ಸ್ಟೆಲ್ಲಾ ಮೇರಿ, ನಿರ್ಮಲಾ ಹಂಜಗಿ, ಸೋಮು ಹಂಜಗಿ, ಎಸ್‌.ಪಿ. ಹುಬ್ಳಿಕರ, ಮೇರಿ ಮುರಡಿ, ಅಶ್ವಿನಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT