ಧಾರವಾಡ: ಡಾ. ಚೆನ್ನವೀರ ಕಣವಿ ಅವರು ಉತ್ತರ ಕರ್ನಾಟಕದ ಧೀಮಂತ ಹಾಗೂ ಶ್ರೇಷ್ಠ ಕವಿಯಾಗಿದ್ದರು ಎಂದು ಸಚಿವ ಹಾಲಪ್ಪ ಆಚಾರ ಹೇಳಿದ್ದಾರೆ.
ಇತ್ತೀಚೆಗೆ ಆಸ್ಪತ್ರೆಯಲ್ಲಿದ್ದ ಅವರನ್ನು ಭೇಟಿ ಮಾಡಿದ್ದೆ. ಅವರಿಗೆ ರಾಷ್ಟ್ರಕವಿ ಗೌರವ ನೀಡಬೇಕೆಂಬ ಅಭಿಮಾನಿಗಳ ಒತ್ತಾಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.