<p><strong>ಹುಬ್ಬಳ್ಳಿ: </strong>ನಗರದ ಸನ್ಸಿಟಿ ಹೆರಿಟೇಜ್ ಬಡಾವಣೆಯ 150 ಮನೆಗಳಿಗೆ ಕುಡಿಯುವ ನೀರಿನ ಪೈಪ್ಲೈನ್ ಜೋಡಣೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.</p>.<p>ಹೆರಿಟೇಜ್ ನಿವೇಶನ ಅಭಿವೃದ್ಧಿ ಸಮಯದಲ್ಲಿ ಮಾಡಲಾಗಿದ್ದು ಪೈಪ್ಲೈನ್ಗಳು ಹಾಳಾಗಿದ್ದರಿಂದ ₹18 ಲಕ್ಷ ಅನುದಾನದಲ್ಲಿ 1,700 ಮೀಟರ್ ನೀರಿನ ಹೊಸ ಕೊಳವೆ ಮಾರ್ಗ ನಿರ್ಮಿಸಲಾಗುತ್ತಿದೆ. 150 ಮನೆಗಳಿಗೆ ನಳಸಂಪರ್ಕ ಒದಗಿಸಲಾಗುವುದು ಎಂದು ಶೆಟ್ಟರ್ ಹೇಳಿದರು. ಕಾಮಗಾರಿಯನ್ನು ಆದಷ್ಟು ಬೇಗನೆ ಆರಂಭಿಸುವಂತೆ ಜಲಮಂಡಳಿಯ ಸಹಾಯಕ ಎಂಜಿನಿಯರ್ ವಿ.ಎ.ಗಿಡ್ಡಲಿಂಗಣ್ಣವರ ಅವರಿಗೆ ಸೂಚಿಸಿದರು.</p>.<p>ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಲ್ಲಿಕಾರ್ಜುನ ಸಾಹುಕಾರ್ ಇದ್ದರು.</p>.<p>ಕಿಟ್ ವಿತರಣೆ: ಬಾದಾಮಿ ನಗರದ ಬಾಲ ಉದ್ಯಾನದಲ್ಲಿ ಶೆಟ್ಟರ್ 150 ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ಆಹಾರ ಪದಾರ್ಥಗಳ ಕಿಟ್ ನೀಡಿದರು. ಬಿಜೆಪಿ ಮುಖಂಡರಾದ ಮೇನಕಾ ಹುರುಳಿ, ಸಂತೋಷ ಚವ್ಹಾಣ ಇದ್ದರು.</p>.<p>ಕಾಮಗಾರಿ ವೀಕ್ಷಣೆ: ₹10 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಬೈರಿದೇವರಕೊಪ್ಪ–ಗಾಮನಗಟ್ಟಿ ರಸ್ತೆ ದುರಸ್ತಿ ಕಾಮಗಾರಿಯನ್ನು ಶೆಟ್ಟರ್ ಪರಿಶೀಲಿಸಿದರು.</p>.<p>ಈ ವೇಳೆ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿಗಳು ‘ಗಾಮನಗಟ್ಟಿ ರಸ್ತೆಯ ಸನಿಹ ಸೇತುವೆಯ ಎತ್ತರ ಹೆಚ್ಚಿಸಬೇಕು. ಆ ಸೇತುವೆಯನ್ನು ಕಾಂಕ್ರೀಟ್ನಿಂದ ನಿರ್ಮಿಸಬೇಕು’ ಎಂದು ಮನವಿ ಮಾಡಿದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಸಚಿವರು ಪಾಲಿಕೆ ವತಿಯಿಂದ ಕಾಂಕ್ರೀಟ್ ಸೇತುವೆ ನಿರ್ಮಿಸುವಂತೆ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೆ ಸೂಚಿಸಿದರು.</p>.<p>ವಿಧಾನ ಪರಿಷತ್ ಶಾಸಕ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ಮಹೇಶ ಕಲಬುರ್ಗಿ, ಆಯುಕ್ತ ನಿಂಗಪ್ಪ ಕುಮ್ಮಣ್ಣನವರ, ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಸಂಗೊಳ್ಳಿ ರಾಯಣ್ಣನಗರ ನಾಗರಿಕರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ವಿ.ಎಸ್. ಸಜ್ಜನಶೆಟ್ಟರ್, ವಿ.ಎಸ್.ಪಾಟೀಲ, ಎಸ್.ಡಿ.ದೇಸಾಯಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ನಗರದ ಸನ್ಸಿಟಿ ಹೆರಿಟೇಜ್ ಬಡಾವಣೆಯ 150 ಮನೆಗಳಿಗೆ ಕುಡಿಯುವ ನೀರಿನ ಪೈಪ್ಲೈನ್ ಜೋಡಣೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.</p>.<p>ಹೆರಿಟೇಜ್ ನಿವೇಶನ ಅಭಿವೃದ್ಧಿ ಸಮಯದಲ್ಲಿ ಮಾಡಲಾಗಿದ್ದು ಪೈಪ್ಲೈನ್ಗಳು ಹಾಳಾಗಿದ್ದರಿಂದ ₹18 ಲಕ್ಷ ಅನುದಾನದಲ್ಲಿ 1,700 ಮೀಟರ್ ನೀರಿನ ಹೊಸ ಕೊಳವೆ ಮಾರ್ಗ ನಿರ್ಮಿಸಲಾಗುತ್ತಿದೆ. 150 ಮನೆಗಳಿಗೆ ನಳಸಂಪರ್ಕ ಒದಗಿಸಲಾಗುವುದು ಎಂದು ಶೆಟ್ಟರ್ ಹೇಳಿದರು. ಕಾಮಗಾರಿಯನ್ನು ಆದಷ್ಟು ಬೇಗನೆ ಆರಂಭಿಸುವಂತೆ ಜಲಮಂಡಳಿಯ ಸಹಾಯಕ ಎಂಜಿನಿಯರ್ ವಿ.ಎ.ಗಿಡ್ಡಲಿಂಗಣ್ಣವರ ಅವರಿಗೆ ಸೂಚಿಸಿದರು.</p>.<p>ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಲ್ಲಿಕಾರ್ಜುನ ಸಾಹುಕಾರ್ ಇದ್ದರು.</p>.<p>ಕಿಟ್ ವಿತರಣೆ: ಬಾದಾಮಿ ನಗರದ ಬಾಲ ಉದ್ಯಾನದಲ್ಲಿ ಶೆಟ್ಟರ್ 150 ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ಆಹಾರ ಪದಾರ್ಥಗಳ ಕಿಟ್ ನೀಡಿದರು. ಬಿಜೆಪಿ ಮುಖಂಡರಾದ ಮೇನಕಾ ಹುರುಳಿ, ಸಂತೋಷ ಚವ್ಹಾಣ ಇದ್ದರು.</p>.<p>ಕಾಮಗಾರಿ ವೀಕ್ಷಣೆ: ₹10 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಬೈರಿದೇವರಕೊಪ್ಪ–ಗಾಮನಗಟ್ಟಿ ರಸ್ತೆ ದುರಸ್ತಿ ಕಾಮಗಾರಿಯನ್ನು ಶೆಟ್ಟರ್ ಪರಿಶೀಲಿಸಿದರು.</p>.<p>ಈ ವೇಳೆ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿಗಳು ‘ಗಾಮನಗಟ್ಟಿ ರಸ್ತೆಯ ಸನಿಹ ಸೇತುವೆಯ ಎತ್ತರ ಹೆಚ್ಚಿಸಬೇಕು. ಆ ಸೇತುವೆಯನ್ನು ಕಾಂಕ್ರೀಟ್ನಿಂದ ನಿರ್ಮಿಸಬೇಕು’ ಎಂದು ಮನವಿ ಮಾಡಿದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಸಚಿವರು ಪಾಲಿಕೆ ವತಿಯಿಂದ ಕಾಂಕ್ರೀಟ್ ಸೇತುವೆ ನಿರ್ಮಿಸುವಂತೆ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೆ ಸೂಚಿಸಿದರು.</p>.<p>ವಿಧಾನ ಪರಿಷತ್ ಶಾಸಕ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ಮಹೇಶ ಕಲಬುರ್ಗಿ, ಆಯುಕ್ತ ನಿಂಗಪ್ಪ ಕುಮ್ಮಣ್ಣನವರ, ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಸಂಗೊಳ್ಳಿ ರಾಯಣ್ಣನಗರ ನಾಗರಿಕರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ವಿ.ಎಸ್. ಸಜ್ಜನಶೆಟ್ಟರ್, ವಿ.ಎಸ್.ಪಾಟೀಲ, ಎಸ್.ಡಿ.ದೇಸಾಯಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>