ಪ್ರಮುಖರಾದ ಕೃಷ್ಣಮೂರ್ತಿ, ಸುರೇಶರಾವ್, ವೀರೇಶ್ ಇತರರು ಇದ್ದರು. ಸಮಾಲೋಚನೆ ಬಳಿಕ ಮಾತನಾಡಿದ ಸಂಘದ ಪ್ರಮುಖ ಸು.ರಾಮಣ್ಣ ಅವರು, ಸಹಕಾರಿ ಸಚಿವರಾದ ಸೋಮಶೇಖರ್ ಅವರು ಬೆಂಗಳೂರಿನ ಚನ್ನೇನಹಳ್ಳಿಯಲ್ಲಿರುವ ಸಂಘದ ಜನಸೇವಾ ವಿದ್ಯಾಕೇಂದ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರು ಭೇಟಿ ನೀಡುವ ಪ್ರತಿ ಜಿಲ್ಲೆಯಲ್ಲೂ ಸಂಘದ ಕಚೇರಿಗೆ ಭೇಟಿ ನೀಡುತ್ತಾರೆ. ಅಂತೆಯೇ ಇಲ್ಲಿಗೂ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು ಎಂದು ತಿಳಿಸಿದರು.