ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಪೆಂಡಾಲ್ ನಲ್ಲಿ ಬುಧವಾರ ರಾತ್ರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಜಗದೀಶ ಶೆಟ್ಟರ್ ಅವರು ಭಜನೆ ಹಾಡಿದರು.
ಸ್ಥಳೀಯ ಬಿಜೆಪಿ ನಾಯಕರು, ಮಹಾನಗರ ಪಾಲಿಕೆ ಸದಸ್ಯರು, ಗಜಾನನ ಉತ್ಸವ ಮಹಾಮಂಡಳಿ ಸದಸ್ಯರು ಅವರಿಗೆ ಸಾಥ್ ನೀಡಿದರು.
ಈದ್ಗಾ ಮೈದಾನದಲ್ಲಿ ಸಚಿವರು, ಶಾಸಕರ ಭಜನೆ
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಬುಧವಾರ ಗಣೇಶ ಮೂರ್ತಿಯ ಪ್ರತಿಷ್ಠಾಪನೆ.
ಗಣಪತಿ ಪೆಂಡಾಲ್ಗೆ ಬುಧವಾರ ರಾತ್ರಿ ಆಗಮಿಸಿದ ಬಿಜೆಪಿ ನಾಯಕರಿಂದ ಭಜನೆ.