ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟ್ಟರ್‌ ಜನ್ಮದಿನ: ನೇತ್ರದಾನ ಶಿಬಿರ

Last Updated 18 ಡಿಸೆಂಬರ್ 2021, 5:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎಸ್.ಎಸ್. ಶೆಟ್ಟರ್‌ ಪೌಂಡೇಷನ್ ಹಾಗೂ ಜಯಪ್ರಿಯಾ ಆಸ್ಪತ್ರೆ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಶುಕ್ರವಾರ ನೇತ್ರದಾನ, ಶಸ್ತ್ರಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ತಮ್ಮ 66ನೇ ಜನ್ಮದಿನದ ಅಂಗವಾಗಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಜಗದೀಶ ಶೆಟ್ಟರ್‌, ‘ನನ್ನ ಜನ್ಮದಿನವನ್ನು ಅಭಿಮಾನಿಗಳು ಪ್ರತಿ ವರ್ಷ ಸಮಾಜಮುಖಿ, ರಚನಾತ್ಮಕ ಕೆಲಸ ಮಾಡುವ ಮೂಲಕ ಆಚರಿಸುತ್ತಾರೆ. ಜನ್ಮ ದಿನಕ್ಕೆ ಹಾರ-ತುರಾಯಿಗಳನ್ನು ತರದೇ ಪುಸ್ತಕಗಳನ್ನು ನೀಡಿ ಎಂದು ಮನವಿ ಮಾಡಿದ್ದೆ. ಅನೇಕರು ಪುಸ್ತಕಗಳನ್ನು ನೀಡಿದ್ದು ಸಂತಸವಾಗಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್‌,ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಶೆಟ್ಟರ್‌ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳಿದರು.

ಸೀಮಾ ಮಸೂತಿ, ಶಿಲ್ಪಾ ಶೆಟ್ಟರ್‌, ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ, ವಿಜಯಾನಂದ ಶೆಟ್ಟಿ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ್‌, ಬಸವರಾಜ ಗರಗ, ವೆಂಕಟರಮಣ ಕಟ್ಟಿ, ಪ್ರಿಯಾ ಕಟ್ಟಿ, ಪ್ರಮೋದ ಸೆವಂತಿ, ಸಂಕಲ್ಪ ಶೆಟ್ಟರ್‌, ಡಾ. ಮಹಾಂತೇಶ ಸಜ್ಜನರ, ವಿರೂಪಾಕ್ಷಿ ರಾಯನಗೌಡ್ರ, ರವಿ ನಾಯಕ, ಕೃಷ್ಣ ಗಂಡಗಾಳೇಕರ, ಬೀರಪ್ಪ ಖಂಡೇಕರ, ಸಿದ್ದು ಮೋಗಲಿಶೆಟ್ಟರ್, ಮೋಹನ ಶೆಟ್ಟರ್‌, ರಾಮನಾಥ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT