ಹುಬ್ಬಳ್ಳಿ: ‘ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸದಾಶಿವ ನಗರದ ಸರ್ಕಾರಿ ಉರ್ದು ಶಾಲೆಗೆ ವಿಶೇಷ ಆದ್ಯತೆ ನೀಡಿ, ಮಾದರಿ ಶಾಲೆಯನ್ನಾಗಿ ಮಾಡಲಾಗುವುದು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದರು.
ಇಲ್ಲಿನ ಸದಾಶಿವ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಅಂದಾಜು ₹ 89ಲಕ್ಷ ವೆಚ್ಚದ ಆರು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ಸಂದಿಗ್ಧ ಸಂದರ್ಭದಲ್ಲಿ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಹೊಂದಿರುವ ಶಾಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲಾಗುವುದು. ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಿ, ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ, ಪಾಲಿಕೆ ಸದಸ್ಯರಾದ ಬೀಬಿ ಮರಿಯಮ್ ಮುಲ್ಲಾ, ಸಂಯೋಜಕ ಸಿ.ಶಿವಳ್ಳಿಮಠ, ಮುಖ್ಯಶಿಕ್ಷಕ ಅಷ್ಪಾಕ್ ಹಿರೇಕುಂಬಿ, ಮುಖಂಡರಾದ ಸೈಯದ್ ಸಲೀಂ ಮುಲ್ಲಾ, ಮೆಹಬೂಬ್ ನಾಲಬಂದ್, ಚೇತನಾ ಲಿಂಗದಾಳ, ಮೊಹಮ್ಮದ್ ಶರೀಫ್ ಮೊರಬ್, ಪ್ರೀತಿ ಜೈನ್ ಇದ್ದರು.