ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂ.ಶೇಷಗಿರಿ ಹಾನಗಲ್ ಅವರ ಮೊಮ್ಮಗ ಧ್ರುವ ಅಜಯ ಹಾನಗಲ್ ಕೊಳಲು ವಾದನ, ಪಂ. ರವೀಂದ್ರ ಯಾವಗಲ್ ತಬಲಾ ವಾದನ ಹಾಗೂ ಪಂ.ಎಂ. ವೆಂಕಟೇಶ್ ಕುಮಾರ್ ಅವರು ಗಾಯನ ಪ್ರಸ್ತುತ ಪಡಿಸಲಿದ್ದಾರೆ. ಉದಯರಾಜ್ ಕರ್ಪೂರ್ ಹಾಗೂ ಗೋಪಾಲಕೃಷ್ಣ ಹೆಗಡೆ ತಬಲಾ ಹಾಗೂ ರವೀಂದ್ರ ಕಾತೋಟಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ’ ಎಂದು ಹೇಳಿದರು.