‘ಕ್ಷಮತಾ ಸೇವಾ ಸಂಸ್ಥೆಯು ಹಿಂದೆ ಸಂಗೀತ, ಕ್ರೀಡೆಯಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆದರೆ, ಅವುಗಳು ಸೀಮಿತ ವರ್ಗದ ಜನರನ್ನಷ್ಟೇ ಆಕರ್ಷಿಸುತ್ತಿದ್ದವು. ಹಾಗಾಗಿ, ಮಕ್ಕಳು, ಯುವಜನ, ಮಹಿಳೆಯರಿಂದಿಡಿದು ವಯೋವೃದ್ಧರೂ ಬಂದು ಸಂಭ್ರಮಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂಬ ಉದ್ದೇಶದಿಂದ ಗಾಳಿಪಟ ಉತ್ಸವವನ್ನು ಮೂರು ವರ್ಷದ ಹಿಂದೆ ಆರಂಭಿಸಲಾಯಿತು. ವರ್ಷದಿಂದ ವರ್ಷಕ್ಕೆ ಉತ್ಸವಕ್ಕೆ ಹುಬ್ಬಳ್ಳಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಸಂಸ್ಥೆಯ ಸಂಚಾಲಕ ಹಾಗೂ ಸಚಿವ ಪ್ರಹ್ಲಾದ ಜೋಶಿ ಅವರ ಅಣ್ಣ ಗೋವಿಂದ ಜೋಶಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.