ಪಟ್ಟಣದ ರಸಗೊಬ್ಬರ ಮತ್ತು ಬೀಜ ಮಾರಾಟ ಮಳಿಗೆಗಳಿಗೆ ಶುಕ್ರವಾರ ಬೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆಗಳಿಗೆ ಅವಶ್ಯವಿರುವ ಪೋಷಕಾಂಶಗಳು ವಿವಿಧ ಕಂಪನಿಯ ರಸಗೊಬ್ಬರದಲ್ಲಿ ಒಳಗೊಂಡಿರುತ್ತದೆ. ರೈತರು ನಿರ್ದಿಷ್ಟ ಕಂಪನಿಯ ಗೊಬ್ಬರವೇ ಬೇಕು ಎನ್ನುವ ಮನೋಭಾವನೆಯಿಂದ ಹೊರಗೆ ಬಂದು ಸಾರಜನಕ ಮತ್ತು ರಂಜಕ ಇರುವ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.