<p><strong>ಹುಬ್ಬಳ್ಳಿ:</strong> ಸ್ಮಾರ್ಟ್ ಫೋನ್ ಬಳಸಿ ‘ಬೆಳೆ ಸಮೀಕ್ಷೆ ಆ್ಯಪ್’ ಮೂಲಕ ರೈತರೇ ಸ್ವತಃ ಸಮೀಕ್ಷೆ ಮಾಡುವ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಜಿಲ್ಲೆಯಲ್ಲಿರುವ 2.98 ಲಕ್ಷ ಕೃಷಿ ಹಿಡುವಳಿಗಳ ಪೈಕಿ, ಕಳೆದ 22 ದಿನಗಳಲ್ಲಿ (ಸೆ.2ರವರೆಗೆ) 1 ಲಕ್ಷ ಹಿಡುವಳಿಗಳ ಸಮೀಕ್ಷೆ ಪೂರ್ಣಗೊಂಡಿದೆ. ಧಾರವಾಡ ತಾಲ್ಲೂಕು ಅತಿ ಹೆಚ್ಚು 66,650 ಹಿಡುವಳಿಗಳನ್ನು ಹೊಂದಿದ್ದು, ಇದರಲ್ಲಿ 22,872 ಸಮೀಕ್ಷೆಯಾಗಿದೆ. ಅತಿ ಕಡಿಮೆ 5,807 ಹಿಡುವಳಿ ಹೊಂದಿರುವ ಅಳ್ನಾವರ ತಾಲ್ಲೂಕಿನಲ್ಲಿ 1,742 ಸಮೀಕ್ಷೆಗೆ ಒಳಪಟ್ಟಿವೆ.</p>.<p class="Subhead"><strong>ಬಹುಪಯೋಗಿ</strong></p>.<p>‘ಬೆಳೆ ಸಮೀಕ್ಷೆ ವೈಜ್ಞಾನಿಕವಾಗಿ ಮತ್ತು ನಿಖರವಾಗಿರಬೇಕು ಎಂಬ ಉದ್ದೇಶದಿಂದ, ರೈತರೇ ಮೊಬೈಲ್ ಆ್ಯಪ್ನಲ್ಲಿ ತಮ್ಮ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆ್ಯಪ್ ಮೂಲಕ ಸಂಗ್ರಹಿಸುವ ಬೆಳೆ ಮಾಹಿತಿಯನ್ನು ವಿವಿಧ ಯೋಜನೆಗಳು, ಬೆಳೆ ಪರಿಹಾರ, ಬೆಂಬಲ ಬೆಲೆ, ಉತ್ಪಾದನೆಯ ಲೆಕ್ಕಾಚಾರಗಳಿಗೂ ಈ ಮಾಹಿತಿ ಬಳಕೆಯಾಗಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಐ.ಬಿ. ರಾಜಶೇಖರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>‘ಮುಂಚೆ ಬೆಳೆ ಮಾಹಿತಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ದಾಖಲಿಸಬೇಕಿತ್ತು. ಈಗ ರೈತರು ನೀಡುವ ಸಮೀಕ್ಷೆಯ ಮಾಹಿತಿ ‘ಭೂಮಿ’ ತಂತ್ರಾಂಶಕ್ಕೆ ನೇರವಾಗಿ ಹೋಗಿ, ಪಹಣಿಯಲ್ಲಿ ದಾಖಲಾಗುತ್ತದೆ. ಇದರಿಂದ, ರೈತರು ಪಹಣಿ ಪತ್ರದಲ್ಲಿ ತಪ್ಪಾಗಿದೆ ಎಂದು ದೂರುವಂತಿಲ್ಲ’ ಎಂದು ತಿಳಿಸಿದರು.</p>.<p>‘ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಸಮೀಕ್ಷೆ ನಡೆಯುತ್ತಿದೆ. ಈ ಕುರಿತು ರೇಡಿಯೊ, ಟಿ.ವಿ ಸೇರಿದಂತೆ ಎಲ್ಲಾ ಮಾಧ್ಯಮಗಳ ಮೂಲಕ ಸರ್ಕಾರ ವ್ಯಾಪಕ ಪ್ರಚಾರ ಮಾಡುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ಟ್ಯಾಬ್ಲೊ ವಾಹನದ ಮೂಲಕ ಪ್ರಚಾರ ಕಾರ್ಯ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.</p>.<p class="Briefhead"><strong>ಬೇರೆಯವರ ಮೊಬೈಲ್ನಿಂದಲೂ ಮಾಡಬಹುದು</strong></p>.<p>‘ಸ್ಮಾರ್ಟ್ ಫೋನ್ ಹೊಂದಿಲ್ಲದ ರೈತರು, ಬೇರೆಯವರ ಮೊಬೈಲ್ನಿಂದಲೂ ಸಮೀಕ್ಷೆ ಮಾಡಬಹುದು. ಆ್ಯಪ್ನಲ್ಲಿ ರೈತರು ತಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಸಮೀಕ್ಷೆ ಮಾಡಬೇಕು’ ಎಂದು ಐ.ಬಿ. ರಾಜಶೇಖರ ಹೇಳಿದರು.</p>.<p>‘ಆರಂಭದಲ್ಲಿ ಆಗಸ್ಟ್ 10ರಿಂದ 24ರೊಳಗೆ ಸಮೀಕ್ಷೆ ಮಾಡಬೇಕು ಎಂದು ನಿಗದಿಪಡಿಸಲಾಗಿತ್ತು. ಆದರೆ, ರೈತರ ಪಾಲ್ಗೊಳ್ಳುವಿಕೆ ಕಡಿಮೆ ಇದ್ದಿದ್ದರಿಂದ ಅವಧಿಯನ್ನು ಸೆ. 23ರವರೆಗೆ ವಿಸ್ತರಿಸಲಾಗಿದೆ’ ಎಂದರು.</p>.<p>***</p>.<p>ರೈತರು ಬೆಳೆ ಸಮೀಕ್ಷೆಗೆ ಒಂದು ದಿನ ಮೀಸಲಿಟ್ಟು, ಆ್ಯಪ್ನಲ್ಲಿ ಪ್ರತಿ ಅಂಶವನ್ನು ದಾಖಲಿಸಬೇಕು. ಅನುಮಾನಗಳಿದ್ದರೆ ಸ್ಥಳೀಯ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು<br /><strong>– ಐ.ಬಿ. ರಾಜಶೇಖರ, ಜಂಟಿ ನಿರ್ದೇಶಕ, ಕೃಷಿ ಇಲಾಖೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಸ್ಮಾರ್ಟ್ ಫೋನ್ ಬಳಸಿ ‘ಬೆಳೆ ಸಮೀಕ್ಷೆ ಆ್ಯಪ್’ ಮೂಲಕ ರೈತರೇ ಸ್ವತಃ ಸಮೀಕ್ಷೆ ಮಾಡುವ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಜಿಲ್ಲೆಯಲ್ಲಿರುವ 2.98 ಲಕ್ಷ ಕೃಷಿ ಹಿಡುವಳಿಗಳ ಪೈಕಿ, ಕಳೆದ 22 ದಿನಗಳಲ್ಲಿ (ಸೆ.2ರವರೆಗೆ) 1 ಲಕ್ಷ ಹಿಡುವಳಿಗಳ ಸಮೀಕ್ಷೆ ಪೂರ್ಣಗೊಂಡಿದೆ. ಧಾರವಾಡ ತಾಲ್ಲೂಕು ಅತಿ ಹೆಚ್ಚು 66,650 ಹಿಡುವಳಿಗಳನ್ನು ಹೊಂದಿದ್ದು, ಇದರಲ್ಲಿ 22,872 ಸಮೀಕ್ಷೆಯಾಗಿದೆ. ಅತಿ ಕಡಿಮೆ 5,807 ಹಿಡುವಳಿ ಹೊಂದಿರುವ ಅಳ್ನಾವರ ತಾಲ್ಲೂಕಿನಲ್ಲಿ 1,742 ಸಮೀಕ್ಷೆಗೆ ಒಳಪಟ್ಟಿವೆ.</p>.<p class="Subhead"><strong>ಬಹುಪಯೋಗಿ</strong></p>.<p>‘ಬೆಳೆ ಸಮೀಕ್ಷೆ ವೈಜ್ಞಾನಿಕವಾಗಿ ಮತ್ತು ನಿಖರವಾಗಿರಬೇಕು ಎಂಬ ಉದ್ದೇಶದಿಂದ, ರೈತರೇ ಮೊಬೈಲ್ ಆ್ಯಪ್ನಲ್ಲಿ ತಮ್ಮ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆ್ಯಪ್ ಮೂಲಕ ಸಂಗ್ರಹಿಸುವ ಬೆಳೆ ಮಾಹಿತಿಯನ್ನು ವಿವಿಧ ಯೋಜನೆಗಳು, ಬೆಳೆ ಪರಿಹಾರ, ಬೆಂಬಲ ಬೆಲೆ, ಉತ್ಪಾದನೆಯ ಲೆಕ್ಕಾಚಾರಗಳಿಗೂ ಈ ಮಾಹಿತಿ ಬಳಕೆಯಾಗಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಐ.ಬಿ. ರಾಜಶೇಖರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>‘ಮುಂಚೆ ಬೆಳೆ ಮಾಹಿತಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ದಾಖಲಿಸಬೇಕಿತ್ತು. ಈಗ ರೈತರು ನೀಡುವ ಸಮೀಕ್ಷೆಯ ಮಾಹಿತಿ ‘ಭೂಮಿ’ ತಂತ್ರಾಂಶಕ್ಕೆ ನೇರವಾಗಿ ಹೋಗಿ, ಪಹಣಿಯಲ್ಲಿ ದಾಖಲಾಗುತ್ತದೆ. ಇದರಿಂದ, ರೈತರು ಪಹಣಿ ಪತ್ರದಲ್ಲಿ ತಪ್ಪಾಗಿದೆ ಎಂದು ದೂರುವಂತಿಲ್ಲ’ ಎಂದು ತಿಳಿಸಿದರು.</p>.<p>‘ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಸಮೀಕ್ಷೆ ನಡೆಯುತ್ತಿದೆ. ಈ ಕುರಿತು ರೇಡಿಯೊ, ಟಿ.ವಿ ಸೇರಿದಂತೆ ಎಲ್ಲಾ ಮಾಧ್ಯಮಗಳ ಮೂಲಕ ಸರ್ಕಾರ ವ್ಯಾಪಕ ಪ್ರಚಾರ ಮಾಡುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ಟ್ಯಾಬ್ಲೊ ವಾಹನದ ಮೂಲಕ ಪ್ರಚಾರ ಕಾರ್ಯ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.</p>.<p class="Briefhead"><strong>ಬೇರೆಯವರ ಮೊಬೈಲ್ನಿಂದಲೂ ಮಾಡಬಹುದು</strong></p>.<p>‘ಸ್ಮಾರ್ಟ್ ಫೋನ್ ಹೊಂದಿಲ್ಲದ ರೈತರು, ಬೇರೆಯವರ ಮೊಬೈಲ್ನಿಂದಲೂ ಸಮೀಕ್ಷೆ ಮಾಡಬಹುದು. ಆ್ಯಪ್ನಲ್ಲಿ ರೈತರು ತಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಸಮೀಕ್ಷೆ ಮಾಡಬೇಕು’ ಎಂದು ಐ.ಬಿ. ರಾಜಶೇಖರ ಹೇಳಿದರು.</p>.<p>‘ಆರಂಭದಲ್ಲಿ ಆಗಸ್ಟ್ 10ರಿಂದ 24ರೊಳಗೆ ಸಮೀಕ್ಷೆ ಮಾಡಬೇಕು ಎಂದು ನಿಗದಿಪಡಿಸಲಾಗಿತ್ತು. ಆದರೆ, ರೈತರ ಪಾಲ್ಗೊಳ್ಳುವಿಕೆ ಕಡಿಮೆ ಇದ್ದಿದ್ದರಿಂದ ಅವಧಿಯನ್ನು ಸೆ. 23ರವರೆಗೆ ವಿಸ್ತರಿಸಲಾಗಿದೆ’ ಎಂದರು.</p>.<p>***</p>.<p>ರೈತರು ಬೆಳೆ ಸಮೀಕ್ಷೆಗೆ ಒಂದು ದಿನ ಮೀಸಲಿಟ್ಟು, ಆ್ಯಪ್ನಲ್ಲಿ ಪ್ರತಿ ಅಂಶವನ್ನು ದಾಖಲಿಸಬೇಕು. ಅನುಮಾನಗಳಿದ್ದರೆ ಸ್ಥಳೀಯ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು<br /><strong>– ಐ.ಬಿ. ರಾಜಶೇಖರ, ಜಂಟಿ ನಿರ್ದೇಶಕ, ಕೃಷಿ ಇಲಾಖೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>