ಹುಬ್ಬಳ್ಳಿ: ಶಿವಗಿರಿ ಕಾಲೊನಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಚಯದಲ್ಲಿನ ಲಿಫ್ಟ್ ಕೆಲಸ ನೀಡುವುದಾಗಿ ಅಯೋಧ್ಯಾ ನಗರದ ಫರ್ವೇಜ್ ಬಳಗಾನೂರು ಎಂಬಾತ ಶಕ್ತಿ ಕಾಲೊನಿಯ ಸದಾನಂದ ಜಮಖಂಡಿ ಅವರಿಂದ ₹3.50 ಲಕ್ಷ ಮೊತ್ತದ ಚೆಕ್ ಪಡೆದು ವಂಚಿಸಿದ್ದಾನೆ. ಒಂದು ವರ್ಷದಿಂದ ಕೆಲಸವನ್ನೂ ನೀಡದೆ, ಹಣವನ್ನು ಮರಳಿಸದೆ ವಂಚಿಸಿರುವ ಆರೋಪದ ಮೇಲೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.