ಇತ್ತೀಚಿಗೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗಿದ್ದ ಕಳ್ಳತನದ ಆರೋಪ ಹೊತ್ತಿರುವ ಸೋಂಕಿತ ವ್ಯಕ್ತಿ ನನಗೆ ಊಟ ಸರಿಯಾಗಿ ಸಿಗದ ಕಾರಣ ತಪ್ಪಿಸಿಕೊಂಡು ಹೋಗಿದ್ದೆ ಎಂದು ಹೇಳಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಡ್ಡಾಯವಾಗಿ ಗುಣಮಟ್ಟದ ಊಟ ಕೊಡಬೇಕು, ಸೋಂಕಿತರಿಗೆ ಅಹಾರ ಕೊಡುವ ಮೊದಲು ಅದನ್ನು ಅಧಿಕಾರಿಗಳು ಪರೀಕ್ಷೆ ಮಾಡಬೇಕು ಎಂದು ಸೂಚಿಸಿದ್ದರು.