<p><strong>ಧಾರವಾಡ</strong>: ‘ಪಂಡಿತ ಪಂಚಾಕ್ಷರಿ ಗವಾಯಿಯವರು ಮಾನವೀಯ ಅಂತಃಕರಣ, ಕಠಿಣ ತಪಸ್ಸಿನಿಂದ ಸಂಗೀತ ಕಲಾವಿದರ ಬದುಕಿನ ದಾರಿದೀಪವಾಗಿದ್ದಾರೆ’ ಎಂದು ಡಾ. ಉಮೇಶ ಹಳ್ಳಿಕೇರಿ ಹೇಳಿದರು.</p>.<p>ಪಂ.ಪುಟ್ಟರಾಜ ಗವಾಯಿ ಪ್ರತಿಷ್ಠಾನದ ವತಿಯಿಂದ ಪಂ.ಪಂಚಾಕ್ಷರಿ ಗವಾಯಿಯವರ 135ನೇ ಜಯಂತ್ಯುತ್ಸವ ಅಂಗವಾಗಿ ಇಲ್ಲಿನ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಈಚೆಗೆ ನಡೆದ ಸಂಗೀತೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ಪಂಚಾಕ್ಷರಿ ಗವಾಯಿ ಅವರು ದೀನದುರ್ಬಲರ ಆಶಾಕಿರಣವಾಗಿದ್ದರು. ಸಂಗೀತ ಕಲಿಯವವರಿಗೆ ಜ್ಞಾನದ ಬೆಳಕು ನೀಡಿದವರು. ಹಿಂದೂಸ್ತಾನಿ ಗಾಯನ ಹಾಗೂ ವಾದ್ಯ ಸಂಗೀತ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದರು’ ಎಂದರು.</p>.<p>ಹಿಂದೂಸ್ತಾನಿ ಕಲಾವಿದ ಹನುಮಂತ ಬುರ್ಲಿ ಮಾತನಾಡಿ, ‘ಪಂಚಾಕ್ಷರ ಗವಾಯಿ ಅವರು ಹುಟ್ಟಿನಿಂದ ಅಂಧತ್ವ ಅನುಭವಿಸುತ್ತಲೇ ಅನೇಕ ಕಷ್ಟಗಳನ್ನು ಅನುಭವಿಸಿದರು. ಜೋಳಿಗೆ ಹಾಕಿ, ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆಯೆರೆದರು’ ಎಂದು ತಿಳಿಸಿದರು.</p>.<p>ಪಂ.ಎಂ.ವೆಂಕಟೇಶಕುಮಾರ, ಉದಯಕುಮಾರ ದೇಸಾಯಿ, ಶಂಕರ ಕುಂಬಿ, ಪಿ.ಎಂ.ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ‘ಪಂಡಿತ ಪಂಚಾಕ್ಷರಿ ಗವಾಯಿಯವರು ಮಾನವೀಯ ಅಂತಃಕರಣ, ಕಠಿಣ ತಪಸ್ಸಿನಿಂದ ಸಂಗೀತ ಕಲಾವಿದರ ಬದುಕಿನ ದಾರಿದೀಪವಾಗಿದ್ದಾರೆ’ ಎಂದು ಡಾ. ಉಮೇಶ ಹಳ್ಳಿಕೇರಿ ಹೇಳಿದರು.</p>.<p>ಪಂ.ಪುಟ್ಟರಾಜ ಗವಾಯಿ ಪ್ರತಿಷ್ಠಾನದ ವತಿಯಿಂದ ಪಂ.ಪಂಚಾಕ್ಷರಿ ಗವಾಯಿಯವರ 135ನೇ ಜಯಂತ್ಯುತ್ಸವ ಅಂಗವಾಗಿ ಇಲ್ಲಿನ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಈಚೆಗೆ ನಡೆದ ಸಂಗೀತೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ಪಂಚಾಕ್ಷರಿ ಗವಾಯಿ ಅವರು ದೀನದುರ್ಬಲರ ಆಶಾಕಿರಣವಾಗಿದ್ದರು. ಸಂಗೀತ ಕಲಿಯವವರಿಗೆ ಜ್ಞಾನದ ಬೆಳಕು ನೀಡಿದವರು. ಹಿಂದೂಸ್ತಾನಿ ಗಾಯನ ಹಾಗೂ ವಾದ್ಯ ಸಂಗೀತ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದರು’ ಎಂದರು.</p>.<p>ಹಿಂದೂಸ್ತಾನಿ ಕಲಾವಿದ ಹನುಮಂತ ಬುರ್ಲಿ ಮಾತನಾಡಿ, ‘ಪಂಚಾಕ್ಷರ ಗವಾಯಿ ಅವರು ಹುಟ್ಟಿನಿಂದ ಅಂಧತ್ವ ಅನುಭವಿಸುತ್ತಲೇ ಅನೇಕ ಕಷ್ಟಗಳನ್ನು ಅನುಭವಿಸಿದರು. ಜೋಳಿಗೆ ಹಾಕಿ, ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆಯೆರೆದರು’ ಎಂದು ತಿಳಿಸಿದರು.</p>.<p>ಪಂ.ಎಂ.ವೆಂಕಟೇಶಕುಮಾರ, ಉದಯಕುಮಾರ ದೇಸಾಯಿ, ಶಂಕರ ಕುಂಬಿ, ಪಿ.ಎಂ.ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>