ಶಿಕಕ್ಷರನ್ನು ಮರು ನೇಮಕ ಮಾಡಿಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಶಾಲೆ ಆಡಳಿತ ಮಂಡಳಿ ನಿರ್ದೇಶಕ ಜಿ.ಆರ್.ಭಟ್, ‘ಕಳೆದ ಒಂದು ತಿಂಗಳಿನಿಂದ ತಾಂತ್ರಿಕ ತೊಂದರೆ, ಆಡಳಿತಾತ್ಮಕ ಸಮಸ್ಯೆಯಿಂದ ಶಾಲೆ ತೊಂದರೆಗೆ ಒಳಗಾಗಿತ್ತು. ಆದರೆ ಈಗ ಶಿಕ್ಷಕರ ನೇಮಕದಿಂದ ಎಲ್ಲಾ ಗೊಂದಗಳೂ ಬಗೆಹರಿದಿವೆ. ಶಾಲೆ ಬಿಟ್ಟುಹೋಗಿದ್ದ ವಿದ್ಯಾರ್ಥಿಗಳು ಮರಳಿ ಶಾಲೆಗೆ ಸೇರುತ್ತಿದ್ದಾರೆ. ಇತರರೂ ಶಾಲೆಗೆ ಸೇರಿ ಪೊಲೀಸರ ಮಕ್ಕಳಿಗಾಗಿಯೇ ಇರುವ ಈ ಶಾಲೆಯ ಲಾಭ ಪಡೆಯಬೇಕು’ ಎಂದು ತಿಳಿಸಿದರು.