<p><strong>ಹುಬ್ಬಳ್ಳಿ:</strong> ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಇತ್ತೀಚಿಗೆ ಕುಂದಾಪುರದಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಹುಬ್ಬಳ್ಳಿಯ ದಿವ್ಯಾ ಜ್ಯೋತಿ ಫ್ರಾನ್ಸಿಸ್ 43 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.</p>.<p>ಸ್ಕಾಟ್ನಲ್ಲಿ 105 ಕೆ.ಜಿ., ಬೆಂಚ್ ಪ್ರೆಸ್ನಲ್ಲಿ 45 ಕೆ.ಜಿ. ಮತ್ತು ಡೆಡ್ ಲಿಫ್ಟ್ನಲ್ಲಿ 110 ಕೆ.ಜಿ. ಭಾರ ಎತ್ತುವ ಮೂಲಕ ಅವರು ಈ ಸಾಧನೆ ಮಾಡಿದರು. ಒಟ್ಟು 260 ಕೆ.ಜಿ. ಭಾರ ಎತ್ತಿದರು.</p>.<p>ರಾಜ್ಯ ಮಟ್ಟದ ಟೂರ್ನಿಯಲ್ಲಿ ದಿವ್ಯಾ ಒಟ್ಟಾರೆಯಾಗಿ ಜಯಿಸಿದ ಮೂರನೇ ಚಿನ್ನದ ಪದಕವಿದು. 2018ರಲ್ಲಿ ಕೊಯಮತ್ತೂರಿನಲ್ಲಿ ನಡೆದಿದ್ದ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.</p>.<p>‘ನಿತ್ಯ ಜಿಮ್ನಲ್ಲಿ ಸುಮಾರು ಎರಡೂವರೆ ಗಂಟೆ ದೈಹಿಕ ಕಸರತ್ತು ಮಾಡುತ್ತೇನೆ. ಪೌಷ್ಠಿಕ ಆಹಾರ, ಹಸಿ ತರಕಾರಿಗಳನ್ನು ಹೆಚ್ಚಾಗಿ ತಿನ್ನುತ್ತೇನೆ. ಇದರಿಂದ ಉತ್ತಮ ದೈಹಿಕ ಶಕ್ತಿ ಗಳಿಸಲು ಸಾಧ್ಯವಾಗಿದೆ. ಇದೇ ವರ್ಷದ ಸೆಪ್ಟೆಂಬರ್ನಲ್ಲಿ ಕೇರಳದಲ್ಲಿ ರಾಷ್ಟ್ರೀಯ ಟೂರ್ನಿಯಿದೆ. ಕೆನಡಾದಲ್ಲಿ ವಿಶ್ವ ಚಾಂಪಿಯನ್ಷಿಪ್ ಜರುಗಲಿದೆ. ಈ ಎರಡೂ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ. ಅದಕ್ಕೆ ಈಗ ಗೆದ್ದ ಪದಕ ಸ್ಫೂರ್ತಿಯಾಗಲಿದೆ’ ಎಂದು ದಿವ್ಯಾ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಇತ್ತೀಚಿಗೆ ಕುಂದಾಪುರದಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಹುಬ್ಬಳ್ಳಿಯ ದಿವ್ಯಾ ಜ್ಯೋತಿ ಫ್ರಾನ್ಸಿಸ್ 43 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.</p>.<p>ಸ್ಕಾಟ್ನಲ್ಲಿ 105 ಕೆ.ಜಿ., ಬೆಂಚ್ ಪ್ರೆಸ್ನಲ್ಲಿ 45 ಕೆ.ಜಿ. ಮತ್ತು ಡೆಡ್ ಲಿಫ್ಟ್ನಲ್ಲಿ 110 ಕೆ.ಜಿ. ಭಾರ ಎತ್ತುವ ಮೂಲಕ ಅವರು ಈ ಸಾಧನೆ ಮಾಡಿದರು. ಒಟ್ಟು 260 ಕೆ.ಜಿ. ಭಾರ ಎತ್ತಿದರು.</p>.<p>ರಾಜ್ಯ ಮಟ್ಟದ ಟೂರ್ನಿಯಲ್ಲಿ ದಿವ್ಯಾ ಒಟ್ಟಾರೆಯಾಗಿ ಜಯಿಸಿದ ಮೂರನೇ ಚಿನ್ನದ ಪದಕವಿದು. 2018ರಲ್ಲಿ ಕೊಯಮತ್ತೂರಿನಲ್ಲಿ ನಡೆದಿದ್ದ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.</p>.<p>‘ನಿತ್ಯ ಜಿಮ್ನಲ್ಲಿ ಸುಮಾರು ಎರಡೂವರೆ ಗಂಟೆ ದೈಹಿಕ ಕಸರತ್ತು ಮಾಡುತ್ತೇನೆ. ಪೌಷ್ಠಿಕ ಆಹಾರ, ಹಸಿ ತರಕಾರಿಗಳನ್ನು ಹೆಚ್ಚಾಗಿ ತಿನ್ನುತ್ತೇನೆ. ಇದರಿಂದ ಉತ್ತಮ ದೈಹಿಕ ಶಕ್ತಿ ಗಳಿಸಲು ಸಾಧ್ಯವಾಗಿದೆ. ಇದೇ ವರ್ಷದ ಸೆಪ್ಟೆಂಬರ್ನಲ್ಲಿ ಕೇರಳದಲ್ಲಿ ರಾಷ್ಟ್ರೀಯ ಟೂರ್ನಿಯಿದೆ. ಕೆನಡಾದಲ್ಲಿ ವಿಶ್ವ ಚಾಂಪಿಯನ್ಷಿಪ್ ಜರುಗಲಿದೆ. ಈ ಎರಡೂ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ. ಅದಕ್ಕೆ ಈಗ ಗೆದ್ದ ಪದಕ ಸ್ಫೂರ್ತಿಯಾಗಲಿದೆ’ ಎಂದು ದಿವ್ಯಾ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>