ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಪಾವಳಿ ಪ್ರದರ್ಶನ ನಾಳೆಯಿಂದ

Last Updated 13 ಡಿಸೆಂಬರ್ 2022, 7:29 IST
ಅಕ್ಷರ ಗಾತ್ರ

ಧಾರವಾಡ: ‘ಕಲಾವಿದೆ ಕೆ.ವಿ.ಮಂಜುಳಾ ಅವರ ‘ಪುಷ್ಪಾವಳಿ’ ಶೀರ್ಷಿಕೆಯ ಜಲವರ್ಣ ಕಲಾಕೃತಿಗಳ ಪ್ರದರ್ಶನವನ್ನು ಡಿ. 14ರಿಂದ ಆಯೋಜಿಸಲಾಗಿದೆ’ ಎಂದು ಕಲಾವಿದ ಎಂ.ಎಸ್.ಲಂಗೋಟಿ ತಿಳಿಸಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಕಲಾ ಗ್ಯಾಲರಿಯಲ್ಲಿ ಆಯೋಜಿಸಲಾಗಿರುವ ಈ ಕಲಾ ಪ್ರದರ್ಶನದಲ್ಲಿ ಬಳ್ಳಿ ಹೂವುಗಳ ಕುರಿತ 35 ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಡಿ. 16ರವರಗೆ ಪ್ರದರ್ಶನ ನಡೆಯಲಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಲಾವಿದೆ ಮಂಜುಳಾ ಮಾತನಾಡಿ, ‘ನಿಸರ್ಗದಲ್ಲಿನ ಹೂವಿನ ಚೆಲುವನ್ನು ವಿವಿಧ ಕೋನಗಳಿಂದ ಕಂಡು ಅನುಭವಿಸಿ, ಅದಕ್ಕೆ ಕಲಾಕೃತಿ ರೂಪ ನೀಡಲಾಗಿದೆ. ಮೂಲ ಬಣ್ಣಗಳ ಜತೆಗೆ ಮಿಶ್ರ ಬಣ್ಣಗಳ ಬಳಕೆ ಮಾಡಲಾಗಿದೆ. ಪ್ರತಿ ವರ್ಷವೂ ಒಂದೊಂದು ವಿಷಯ ಕುರಿತು ಕಲಾಕೃತಿಗಳನ್ನು ರಚಿಸುತ್ತಾ ಬರುತ್ತಿದ್ದೇನೆ. ಇವುಗಳನ್ನು ಬೆಂಗಳೂರು, ಮೈಸೂರು, ಗೋವಾ, ಮುಂಬೈ, ಹುಬ್ಬಳ್ಳಿಯಲ್ಲಿ ಪ್ರದರ್ಶನ ಮಾಡಲಾಗಿದೆ’ ಎಂದರು.

‘ಪುಷ್ಪಾವಳಿ ಕಲಾಕೃತಿ ಪ್ರದರ್ಶನಕ್ಕೆ ಡಿ. 14ರಂದು ಬೆಳಿಗ್ಗೆ 11ಕ್ಕೆ ಹಿರಿಯ ಕಲಾವಿದ ಈಶ್ವರ ಎನ್. ಜೋಶಿ ಚಾಲನೆ ನೀಡಲಿದ್ದಾರೆ. ಗಾಯತ್ರಿ ಮಧು ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಸವರಾಜ ಕುರಿಯವರ, ಬಿ.ಮಾರುತಿ, ಮಡಿವಾಳಪ್ಪ ಎಸ್.ಲಂಗೋಟೆ ಇರಲಿದ್ದಾರೆ’ ಎಂದು ಮಂಜುಳಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT