ಹೆಗ್ಗೇರಿಯ ಜೆ.ಪಿ. ನಗರದಲ್ಲಿ ಶಿಥಿಲಗೊಂಡಿದ್ದ ಯಲ್ಲುಬಾಯಿ ಸೋಳಂಕಿ ಎಂಬುವರ ಮನೆ ಮಳೆಗೆ ಮತ್ತಷ್ಟು ಕುಸಿದಿದೆ. ಹಳೇ ಹುಬ್ಬಳ್ಳಿ, ಅಶೋಕ ನಗರದ ರೈಲ್ವೆ ಸೇತುವೆ, ಹಳೇ ಹುಬ್ಬಳ್ಳಿ ಭಾಗದಲ್ಲಿಯೂ ರಸ್ತೆ ಗುಂಟ ನೀರು ಹರಿಯಿತು. ನಗರದ ವಿವಿಧೆಡೆ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದ್ದು, ಅದನ್ನು ಹಾಗೆಯೇ ಬಿಡಲಾಗಿದೆ. ರಸ್ತೆ ಮಧ್ಯದಲ್ಲಿ ಒಳಚರಂಡಿಯ ಮ್ಯಾನ್ಹೋಲ್ಗಳು ವಾಹನ ಸವಾರರಿಗೆ ಅಡ್ಡಿಯುಂಟು ಮಾಡಿದವು.