ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಬಳ್ಳಿ ತಾಗಿರುವುದು
ಹುಬ್ಬಳ್ಳಿಯ ದೇಶಪಾಂಡೆ ನಗರದ ರಸ್ತೆಯಲ್ಲಿ ಮರಗಳ ಕೊಂಬೆಗಳು ಚಾಚಿಕೊಂಡಿರುವುದು
ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಮರವೊಂದು ಒಣಗಿದ್ದು ಭಾರಿ ಮಳೆಯಾದರೆ ಕುಸಿಯುವ ಹಂತದಲ್ಲಿದೆ

ಈಗಾಗಲೇ ರ್ಯಾಪಿಡ್ ಆ್ಯಕ್ಷನ್ ತಂಡ ನಿಯೋಜಿಸಲಾಗಿದೆ. ಅಪಾಯಕಾರಿ ಮರ ರೆಂಬೆ ಕೊಂಬೆ ಹಾಗೂ ವಿದ್ಯುತ್ ತಂತಿ ಜೋತುಬಿದ್ದಿರುವ ಪ್ರದೇಶಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ
ದಿವ್ಯಪ್ರಭು ಜಿಲ್ಲಾಧಿಕಾರಿ
ಸಾರ್ವಜನಿಕರು ಮರಗಳ ಹಾಗೂ ಕೊಂಬೆಗಳ ತೆರವುಗೊಳಿಸುವಂತೆ ಮನವಿ ಸಲ್ಲಿಸುತ್ತಾರೆ. ಅರಣ್ಯ ಅಧಿಕಾರಿಗಳ ತಂಡ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಪಾಯಕಾರಿ ಆಗಿದ್ದರೆ ಮಾತ್ರ ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ
ವಿವೇಕ ಕವರಿ ಉಪ ಅರಣ್ಯ ಸಂರಕ್ಷಣಾಧಿಕಾರಿ
ರಸ್ತೆಬದಿಯಲ್ಲಿ ಮುರಿದುಬಿದ್ದ ಮರಗಳ ಟೊಂಗೆಯನ್ನು ಮಾತ್ರ ತೆರವು ಮಾಡಲಾಗುತ್ತಿದೆ. ಆದರೆ ಕೆಲವಡೆ ಉದ್ಯಾನಗಳಲ್ಲಿ ಮುರಿದ ಮರದ ಟೊಂಗೆಗಳನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ವಾಯುವಿಹಾರಿಗಳು ತೊಂದರೆ ಅನುಭವಿಸುವಂತಾಗಿದೆ
ಸುರೇಶ ಮಿಸ್ಕಿನ್ ಹುಬ್ಬಳ್ಳಿ ನಿವಾಸಿ
ರಸ್ತೆಬದಿಯಲ್ಲಿ ಮುರಿದುಬಿದ್ದ ಮರಗಳ ಟೊಂಗೆಯನ್ನು ಮಾತ್ರ ತೆರವು ಮಾಡಲಾಗುತ್ತಿದೆ. ಆದರೆ ಕೆಲವಡೆ ಉದ್ಯಾನಗಳಲ್ಲಿ ಮುರಿದ ಮರದ ಟೊಂಗೆಗಳನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ವಾಯುವಿಹಾರಿಗಳು ತೊಂದರೆ ಅನುಭವಿಸುವಂತಾಗಿದೆ
ಸುರೇಶ ಮಿಸ್ಕಿನ್ ಹುಬ್ಬಳ್ಳಿ ನಿವಾಸಿ
ವಿದ್ಯಾನಗರದ ಓಲ್ಡ್ ಇನ್ಕಮ್ ಟ್ಯಾಕ್ಸ್ ರಸ್ತೆಯ ಬದಿ ಪಾನಿಪೂರಿ ವ್ಯಾಪಾರ ಮಾಡುತ್ತಿದ್ದೆ. ಮಳೆಗೆ ಗೂಡಂಗಡಿ ಮೇಲೆ ಮರ ಬಿದ್ದು ಅಂಗಡಿಯೇ ಹಾಳಾಯಿತು. ಹೊಸ ಗೂಡಂಗಡಿಗಾಗಿ ಇಂದಿಗೂ ಕಷ್ಟಪಡುವಂತಾಗಿದೆ
–ಹೆಸರು ಹೇಳಲಿಚ್ಚಿಸದ ವ್ಯಾಪಾರಿ
ವಿದ್ಯುತ್ ತಂತಿಗೆ ಎಲ್ಲೆಲ್ಲಿ ಮರದ ಕೊಂಬೆಗಳು ತಗುಲುತ್ತಿವೆ ಎಂದು ಪ್ರತಿ ಮಳೆಗಾಲದ ಪೂರ್ವ ಸಮೀಕ್ಷೆ ನಡೆಸಿ ತೆರವುಗೊಳಿಸಲಾಗುತ್ತದೆ. ಈ ಬಾರಿಯೂ ವಾರ್ಡ್ವಾರು ಈ ಕೆಲಸ ಪ್ರಗತಿಯಲ್ಲಿದೆ
–ಹೆಸ್ಕಾಂ ಅಧಿಕಾರಿ ಹುಬ್ಬಳ್ಳಿ
ಮರದ ಕೊಂಬೆಗಳು ಬಿದ್ದರೆ ಅದನ್ನು ಪಾಲಿಕೆ ಸಿಬ್ಬಂದಿಯೇ ಬಂದು ತೆರವು ಮಾಡಬೇಕು ಎಂಬ ಮನೋಭಾವವನ್ನು ಜನರು ಬದಲಿಸಿಕೊಳ್ಳಬೇಕು. ಪಾಲಿಕೆಯೊಂದಿಗೆ ಸಾರ್ವಜನಿಕರೂ ಕೈಜೋಡಿಸಿದಾಗ ಮಾತ್ರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯಲಿವೆ
ಚನ್ನು ಹೊಸಮನಿ ಪರಿಸರ ಪ್ರೇಮಿ‘ಸಮಸ್ಯೆಗಳಿದ್ದರೆ ಪಾಲಿಕೆಗೆ ಕರೆ ಮಾಡಿ’
‘ಈಗಾಗಲೇ ಮಹಾನಗರ ಪಾಲಿಕೆಯಿಂದ ಮಳೆಗಾಲ ನಿರ್ವಹಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಅಪಾಯಕಾರಿ ಮರ ಕೊಂಬೆಗಳ ತೆರವಿಗೆ ತಂಡ ನಿಯೋಜಿಸಲಾಗಿದೆ. ಜೋತುಬಿದ್ದ ವಿದ್ಯುತ್ ತಂತಿ ಶಿಥಿಲಗೊಂಡ ವಿದ್ಯುತ್ ಕಂಬ ಬದಲಾವಣೆಗೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಪಾಲಿಕೆ ವಾಪ್ತಿಯಲ್ಲಿ ಒಳಚರಂಡಿ ರಾಜಕಾಲುವೆ ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಮಳೆಯಿಂದ ಹಾನಿಯಾದರೆ ಸಾರ್ವಜನಿಕರು 82778 03778 ವಾಟ್ಸ್ಆ್ಯಪ್ ಸಂಖ್ಯೆ ಹಾಗೂ ದೂ.ಸಂ 0836–2213888 2213889 ಹಾಗೂ 2213869ಕ್ಕೆ ಕರೆ ಮಾಡಿ ತಿಳಿಸಬಹುದು. ಇ–ಮೇಲ್ hdmccontrolroom@gmail.com ಮೂಲಕ ಮಾಹಿತಿ ನೀಡಬಹುದು’ ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.
ಮನವಿಗೆ ಸಿಗದ ಸ್ಪಂದನೆ: ಆರೋಪ
ಧಾರವಾಡ: ನಗರದ ಹಲವೆಡೆ ರಸ್ತೆ ಬದಿಯ ಕೆಲವು ಮರಗಳು ಒಣಗಿವೆ. ಕೊಂಬೆಗಳು ವಿದ್ಯುತ್ ಕಂಬಗಳು ಬಾಗಿದ್ದು ಮಳೆ–ಗಾಳಿಗೆ ಬೀಳುವ ಸ್ಥಿತಿಗೆ ತಲುಪಿವೆ. ಇತ್ತೀಚೆಗೆ ಸುರಿದ ಮಳೆಗೆ ಸಿಬಿಟಿ (ನಗರ ಬಸ್ ನಿಲ್ದಾಣ) ಸಮೀಪ ರಸ್ತೆ ಬದಿಯ ಮರವೊಂದರ ದೊಡ್ಡ ಕೊಂಬೆ ಮುರಿದು ಬಿದ್ದು ಸರಕು ಸಾಗಣೆ ವಾಹನ ಎರಡು ಬೈಕ್ಗಳು ಜಖಂಗೊಂಡಿದ್ದವು. ಕೆಲಗೇರಿ ಕೆರೆ ಪಕ್ಕದ ಕಾಂಕ್ರೀಟ್ ರಸ್ತೆ (ಕೆಸಿಡಿ ಕಡೆಗಿನ ಸಂಪರ್ಕ ಮಾರ್ಗ) ಜರ್ಮನ್ ವೃತ್ತದಿಂದ ಕೆಲಗೇರಿ ಕಡೆಗಿನ ರಸ್ತೆ ಸಹಿತ ವಿವಿಧೆಡೆ ರಸ್ತೆ ಬದಿ ಕೆಲ ಮರಗಳ ಕೊಂಬೆಗಳು ಬಾಗಿವೆ. ಮರಗಳು ವಿದ್ಯುತ್ ಕಂಬಗಳಲ್ಲಿ ಕೇಬಲ್ (ಡಿಶ್ ಎಫ್ಟಿಟಿಎಚ್) ಜೋತುಬಿದ್ದಿವೆ. ಹಲವೆಡೆ ರಸ್ತೆ ಮಧ್ಯೆದಲ್ಲಿಯೇ ಬಿದ್ದಿವೆ. ಕೇಬಲ್ ತುಳಿದುಕೊಂಡೇ ಸಂಚರಿಸುವ ಸ್ಥಿತಿ ಇದೆ. ಹೆಸ್ಕಾಂ ಮತ್ತು ಪಾಲಿಕೆ ‘ಜಾಣ ಕುರುಡು ಮತ್ತು ಮೌನ’ ವಹಿಸಿವೆ. ‘ಬಾಗಿರುವ ಅಪಾಯದ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಕತ್ತರಿಸುವುದು ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಪಾಲಿಕೆ ಮತ್ತು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ. ಮಂಜಾಗ್ರತೆ ವಹಿಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಪತ್ರ ನೀಡಿದ್ದೇವೆ. ಈವರೆಗೆ ಕ್ರಮ ವಹಿಸಿಲ್ಲ’ ಎಂದು ಹುಬ್ಬಳ್ಳಿ–ಧಾರವಾಡ ಪರಿಸರ ನಾಗರಿಕ ಸಮಿತಿ ಅಧ್ಯಕ್ಷ ಶಂಕರ ಕುಂಬಿ ‘ಪ್ರಜಾವಾಣಿ’ಗೆ ತಿಳಿಸಿದರು.