‘ಭವಿಷ್ಯದ ವಕೀಲರಾದ ಯುವ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗೆ ವೇದಿಕೆ ಕಲ್ಪಿಸುವುದು, ವಕೀಲಿ ವೃತ್ತಿಗೆ ಅಗತ್ಯವಿರುವ ಅಧ್ಯಯನ ಹಾಗೂ ವಾದ ಮಂಡಣೆಯಂತ ಕೌಶಲವನ್ನು ಕರಗತ ಮಾಡಿಕೊಳ್ಳಲು ಅನುಕೂಲವಾಗುವಂತೆ ಇಂಥ ಅಣಕು ನ್ಯಾಯಾಲಯ ಆಯೋಜಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಸಮಾಜದಲ್ಲಿನ ಕೆಲ ಜಟಿಲ ಸಮಸ್ಯೆಗಳನ್ನೇ ಆಯ್ಕೆ ಮಾಡಲಾಗುತ್ತದೆ. ಆ ವಿಷಯ ಕುರಿತು ಆಳವಾಗಿ ಅಧ್ಯಯನ ನಡೆಸಿ, ವಾದ ಮಂಡಣೆ ಹಾಗೂ ವರದಿ ಸಲ್ಲಿಕೆ ಅಣಕು ನ್ಯಾಯಾಲಯದ ಭಾಗ’ ಎಂದು ವಿವರಿಸಿದರು.