<p><strong>ಹುಬ್ಬಳ್ಳಿ: </strong>ವೇದಿಕೆ ಮೇಲಿಂದ ಕೇಳಿ ಬರುತ್ತಿದ್ದ ಕಂಚಿನ ಕಂಠದ ಇಂಪಾದ ಭಜನೆಗೆ ಅಲ್ಲಿದ್ದವರೆಲ್ಲರೂ ಭಾವಪರವಶರಾಗಿದ್ದರು.ನಾಲ್ಕು ದಿಕ್ಕಿನಿಂದ ಅಂತರ್ಧ್ವನಿಸುತ್ತಿದ್ದ ಗೀತೆಗಳು ಎಲ್ಲರನ್ನೂ ಸಾಯಿಬಾಬಾ ಸ್ಮರಣೆಯಲ್ಲಿ ತೇಲಿಸುತ್ತಿದ್ದವು. ಎಲ್ಲರ ಬಾಯಲ್ಲೂ ಸಾಯಿಬಾಬಾ ಹೆಸರೇ ಧ್ವನಿಸುತ್ತಿದ್ದ ಆ ಸಭಾಂಗಣ, ಕೆಲ ಹೊತ್ತು ಬಾಬಾ ಸನ್ನಿಧಿಯಾಗಿ ಮಾರ್ಪಟ್ಟಿತ್ತು.</p>.<p>ಗುರು ಪೂರ್ಣಿಮಾ ಉತ್ಸವದ ಅಂಗವಾಗಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಸಾಯಿಬಾಬಾ ಭಕ್ತರು ಭಾನುವಾರ ಆಯೋಜಿಸಿದ್ದ ‘ಸಾಯಿ ಭಜನಾ ಸಂಧ್ಯಾ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.</p>.<p>ಭವ್ಯ ವೇದಿಕೆ ಮೇಲೆ ಪ್ರತಿಷ್ಠಾಪಿಸಿದ್ದ ದೀಪಾಲಂಕೃತ ಸಾಯಿಬಾಬಾರ ಭಾವಚಿತ್ರದ ಎದುರು, ಭಜನೆಕಾರರಾದ ಶಿರಡಿಯ ಫಾರಸ ಜೈನ್ ಮತ್ತು ಸಂಗಡಿಗರು ಹಿಂದಿಯಲ್ಲಿ ಬಾಬಾ ಭಜನೆಗಳನ್ನು ಹಾಡುತ್ತಿದ್ದರೆ, ಶೋತ್ರುಗಳೆಲ್ಲರೂ ಕೈ ಮೇಲಕ್ಕೆತ್ತಿ ಚಪ್ಪಾಳೆ ತಟ್ಟುತ್ತಾ ದನಿಗೂಡಿಸುತ್ತಿದ್ದರು.</p>.<p>ಫಾರಸ್ ಅವರ ಬತ್ತಳಿಕೆಯಿಂದ ಬರುತ್ತಿದ್ದ ಸಾಯಿಬಾಬಾರ ಜೀವನ, ಪವಾಡ, ಲೀಲೆಗಳನ್ನು ಕೊಂಡಾಡುವ ಭಜನೆ ಪದಗಳು ಭಕ್ತಿಪರವಶರಾಗಿ ಕುಣಿಯುವಂತೆ ಮಾಡಿದವು.ಪ್ರತಿ ಭಜನೆ ಮುಗಿದಾಗಲೂ ‘ಜೈ ಶ್ರೀ ಸಾಯಿ ಮಹಾರಾಜ್ಕೀ ಜೈ ಜೈ’ ಎಂಬ ಜಯಘೋಷ ನಾಲ್ಕು ದಿಕ್ಕಿನಲ್ಲೂ ಪ್ರತಿಧ್ವನಿಸುತ್ತಿತ್ತು.</p>.<p>ಕಾರ್ಯಕ್ರಮದ ಸಂಯೋಜಕರಾದ ಪ್ರಕಾಶ ಸಾಂಬ್ರಾಣಿ, ಕೋರ್ಟ್ ವೃತ್ತದಲ್ಲಿರುವ ಸಾಯಿಬಾಬಾ ಮಂದಿರದ ಕಮಿಟಿಯ ಮುಖ್ಯಸ್ಥ ಡಾ. ಟಿ.ಎಸ್. ಮೋಹನಕುಮಾರ್, ವಿಶ್ವನಾಥ್ ತಿರುಮಲೆ, ಸಂಜೀವ ಎಲ್. ಭಾಟಿಯಾ, ರಾಜಕುಮಾರ ಮಹಾಜನ, ಜಿತೇಂದ್ರ ಮಜೀಥಿಯಾ, ವಿ.ಎಸ್.ವಿ. ಪ್ರಸಾದ್, ಮೋಹನಕುಮಾರ್ ಇದ್ದರು. ರಾಜು ನಿರೂಪಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ವೇದಿಕೆ ಮೇಲಿಂದ ಕೇಳಿ ಬರುತ್ತಿದ್ದ ಕಂಚಿನ ಕಂಠದ ಇಂಪಾದ ಭಜನೆಗೆ ಅಲ್ಲಿದ್ದವರೆಲ್ಲರೂ ಭಾವಪರವಶರಾಗಿದ್ದರು.ನಾಲ್ಕು ದಿಕ್ಕಿನಿಂದ ಅಂತರ್ಧ್ವನಿಸುತ್ತಿದ್ದ ಗೀತೆಗಳು ಎಲ್ಲರನ್ನೂ ಸಾಯಿಬಾಬಾ ಸ್ಮರಣೆಯಲ್ಲಿ ತೇಲಿಸುತ್ತಿದ್ದವು. ಎಲ್ಲರ ಬಾಯಲ್ಲೂ ಸಾಯಿಬಾಬಾ ಹೆಸರೇ ಧ್ವನಿಸುತ್ತಿದ್ದ ಆ ಸಭಾಂಗಣ, ಕೆಲ ಹೊತ್ತು ಬಾಬಾ ಸನ್ನಿಧಿಯಾಗಿ ಮಾರ್ಪಟ್ಟಿತ್ತು.</p>.<p>ಗುರು ಪೂರ್ಣಿಮಾ ಉತ್ಸವದ ಅಂಗವಾಗಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಸಾಯಿಬಾಬಾ ಭಕ್ತರು ಭಾನುವಾರ ಆಯೋಜಿಸಿದ್ದ ‘ಸಾಯಿ ಭಜನಾ ಸಂಧ್ಯಾ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.</p>.<p>ಭವ್ಯ ವೇದಿಕೆ ಮೇಲೆ ಪ್ರತಿಷ್ಠಾಪಿಸಿದ್ದ ದೀಪಾಲಂಕೃತ ಸಾಯಿಬಾಬಾರ ಭಾವಚಿತ್ರದ ಎದುರು, ಭಜನೆಕಾರರಾದ ಶಿರಡಿಯ ಫಾರಸ ಜೈನ್ ಮತ್ತು ಸಂಗಡಿಗರು ಹಿಂದಿಯಲ್ಲಿ ಬಾಬಾ ಭಜನೆಗಳನ್ನು ಹಾಡುತ್ತಿದ್ದರೆ, ಶೋತ್ರುಗಳೆಲ್ಲರೂ ಕೈ ಮೇಲಕ್ಕೆತ್ತಿ ಚಪ್ಪಾಳೆ ತಟ್ಟುತ್ತಾ ದನಿಗೂಡಿಸುತ್ತಿದ್ದರು.</p>.<p>ಫಾರಸ್ ಅವರ ಬತ್ತಳಿಕೆಯಿಂದ ಬರುತ್ತಿದ್ದ ಸಾಯಿಬಾಬಾರ ಜೀವನ, ಪವಾಡ, ಲೀಲೆಗಳನ್ನು ಕೊಂಡಾಡುವ ಭಜನೆ ಪದಗಳು ಭಕ್ತಿಪರವಶರಾಗಿ ಕುಣಿಯುವಂತೆ ಮಾಡಿದವು.ಪ್ರತಿ ಭಜನೆ ಮುಗಿದಾಗಲೂ ‘ಜೈ ಶ್ರೀ ಸಾಯಿ ಮಹಾರಾಜ್ಕೀ ಜೈ ಜೈ’ ಎಂಬ ಜಯಘೋಷ ನಾಲ್ಕು ದಿಕ್ಕಿನಲ್ಲೂ ಪ್ರತಿಧ್ವನಿಸುತ್ತಿತ್ತು.</p>.<p>ಕಾರ್ಯಕ್ರಮದ ಸಂಯೋಜಕರಾದ ಪ್ರಕಾಶ ಸಾಂಬ್ರಾಣಿ, ಕೋರ್ಟ್ ವೃತ್ತದಲ್ಲಿರುವ ಸಾಯಿಬಾಬಾ ಮಂದಿರದ ಕಮಿಟಿಯ ಮುಖ್ಯಸ್ಥ ಡಾ. ಟಿ.ಎಸ್. ಮೋಹನಕುಮಾರ್, ವಿಶ್ವನಾಥ್ ತಿರುಮಲೆ, ಸಂಜೀವ ಎಲ್. ಭಾಟಿಯಾ, ರಾಜಕುಮಾರ ಮಹಾಜನ, ಜಿತೇಂದ್ರ ಮಜೀಥಿಯಾ, ವಿ.ಎಸ್.ವಿ. ಪ್ರಸಾದ್, ಮೋಹನಕುಮಾರ್ ಇದ್ದರು. ರಾಜು ನಿರೂಪಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>