ಉಪ್ಪಿನಬೆಟಗೇರಿ: ಗ್ರಾಮದ ಮಾರ್ಕೇಟ್ ರಸ್ತೆಯ ಕರಬಸಪ್ಪ ಓಂಕಾರಿ ಎಂಬುವವರ ಮನೆಯ ಹಿತ್ತಲಲ್ಲಿ ಬೆಳೆದಿದ್ದ ಶ್ರೀಗಂಧದ ಗಿಡವನ್ನು ಕತ್ತರಿಸಿದ ಕಳ್ಳರು, ಅದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಸೋಮವಾರ ಬೆಳಗಿನ ಜಾವ ಈ ಕಳವು ನಡೆದಿದೆ. ಗಿಡವನ್ನು ಯಾಂತ್ರಿಕ ಗರಗಸದಿಂದ ಕತ್ತರಿಸಿ, ತುಂಡರಿಸಿಕೊಂಡು ಹೋಗಿದ್ದಾರೆ. ಬೈಕ್ ಮೇಲೆ ಬಂದಿದ್ದ ಇಬ್ಬರು ಮರವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.