ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಿವಕುಮಾರ್ ಹಾಗೂ ಅವರ ಆಪ್ತರ ಮನೆಯ ಮೇಲೆ ದಾಳಿ ನಡೆಸಿ ಅಪಾರ ಹಣ ವಶಪಡಿಸಿಕೊಂಡಿದ್ದರು. ನ್ಯಾಯಾಲಯಕ್ಕೆ ಅಧಿಕಾರಿಗಳು 33 ಪುಟಗಳ ವರದಿಯೊಂದು ಸಲ್ಲಿಸಿದ್ದು, ಅಕ್ರಮ ಸಂಪಾದನೆಯ ಹಣವನ್ನು ಸಕ್ರಮ ಎಂದು ತೋರಿಸಲು ಹಲವ ವ್ಯಕ್ತಿಗಳನ್ನು ಬಳಕೆ ಮಾಡಿಕೊಂಡಿರುವ ಹಾಗೂ ಬೋಗಸ್ ಕಂಪೆನಿಯನ್ನು ತೆರೆದಿರುವ ಉಲ್ಲೇಖ ಇದೆ ಎಂದರು.