ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹೊರಟ್ಟಿ ’ಹೈಕಮಾಂಡ್ನ ಕುಮ್ಮಕ್ಕು ಇಲ್ಲದೇ ಯತ್ನಾಳ ಮಾತನಾಡಿರುವುದಿಲ್ಲ. ಪಕ್ಷದ ವಿರುದ್ಧವಾಗಿ ಮಾತನಾಡಿದ್ದರೂಅವರ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಇದೇ ಎಲ್ಲವನ್ನೂ ಅರ್ಥೈಸುತ್ತದೆ’ ಎಂದರು. ಯತ್ನಾಳ ಹೇಳಿಕೆ, ಬಿಜೆಪಿ ಪ್ರತಿಕ್ರಿಯೆ ಇವೆಲ್ಲವನ್ನೂ ನೋಡಿದರೆ ಪಕ್ಷದಲ್ಲಿ ಆಂತರಿಕ ಕಲಹ ಇರುವುದು ಗೊತ್ತಾಗುತ್ತದೆ ಎಂದರು.