‘ಹಿಂದುಳಿದ ಬಡಕುಟುಂಬದ ವಿದ್ಯಾರ್ಥಿಗಳು ಸರ್ಕಾರದ ನೆರವಿನೊಂದಿಗೆ ತಮ್ಮ ಉನ್ನತ ಶಿಕ್ಷಣ ಬಯಸಿ ಸಂಶೋಧನೆಗೆ ಪ್ರವೇಶ ಪಡೆದಿದ್ದಾರೆ. ಆದರೆ ಕಳೆದ ಎರಡು ವರ್ಷಗಳ ವಿದ್ಯಾರ್ಥಿ ವೇತವನ್ನು ತಡೆ ಹಿಡಿದು, ಈ ವರ್ಷಕ್ಕೆ ಮಾತ್ರ ಅರ್ಜಿ ಕರೆದಿರುವುದು, ಸಂಶೋಧನಾ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ’ ಎಂದು ಸಂಶೋಧನಾ ವಿದ್ಯಾರ್ಥಿ ಮಹಾಂತೇಶ ಕುಂಬಾರ ಆರೋಪಿಸಿದರು.