<p><strong>ಧಾರವಾಡ:</strong> ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮತದಾರರು ಬೆಂಬಲ ನೀಡಬೇಕು ಎಂದು ಕಾರ್ಯಕಾರಿ ಸಮಿತಿ ಮಹಿಳಾ ಮೀಸಲು ಸ್ಥಾನದ ಅಭ್ಯರ್ಥಿ ಸುವರ್ಣಾ ಸುರಕೋಡ ಮನವಿ ಮಾಡಿದರು. </p>.<p>ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 20 ವರ್ಷಗಳಿಂದ ಸಂಘದ ಒಡನಾಟ ಇದೆ. ಸಂಘದ ಕಾನೂನು ಮಂಟಪ, ಶಿಕ್ಷಣ ಮಂಟಪ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಕಾರ್ಯನಿರ್ವಹಿಸಲು ಮತದಾರರು ಅವಕಾಶ ನೀಡಬೇಕು ಎಂದು ಕೋರಿದರು. </p>.<p>ಸಂಘದ ಏಳಿಗೆಗೆ ಶ್ರಮಿಸುವ, ನಾಡು, ನುಡಿಗಾಗಿ ಹೋರಾಡುವ, ಕಲಾವಿದರಿಗೆ ನೆರವು ಕಲ್ಪಿಸುವ, ಸಾಹಿತಿಗಳು ಮತ್ತು ಕಲಾವಿದರಿಗೆ ವೇದಿಕೆ ಕಲ್ಪಿಸುವ, ಹೊರನಾಡು ಮತ್ತು ಗಡಿನಾಡಿನ ಕನ್ನಡಿಗರನ್ನು ರಕ್ಷಿಸುವ ಉದ್ದೇಶ ಹೊಂದಿದ್ದೇನೆ ಎಂದರು. </p>.<p>ಕಾರ್ಯಕಾರಿ ಸಮಿತಿ ಸಾಮಾನ್ಯದ ಸದಸ್ಯ ಸ್ಥಾನದ ಅಭ್ಯರ್ಥಿ ಸಿ.ಎನ್. ಹಿರೇಮಠ ಮಾತನಾಡಿ, ಸಂಘವನ್ನು ರಾಜಕೀಯ ಮುಕ್ತವಾಗಿಸುವ ಮತ್ತು ಪಾರದರ್ಶಕ ಆಡಳಿತ ನಡೆಸುವ ಉದ್ದೇಶ. ಕನ್ನಡ ಶಾಲೆಗಳನ್ನು ಉಳಿಸಲು, ಸರೋಜಿನಿ ಮಹಿಷಿ ವರದಿ ಜಾರಿಗೆ ಹೋರಾಟ ಮಾಡುತ್ತೇನೆ. ಮತದಾರರು ಬೆಂಬಲ ನೀಡಬೇಕು ಎಂದರು.</p>.<p>ಸಂಜೀವ ದಮ್ಮಕನಾಳ, ಹನುಮಾಕ್ಷಿ ಗೋಗಿ, ಮಲ್ಲಮ್ಮ ಭಜಂತ್ರಿ ಸುದ್ದಿಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮತದಾರರು ಬೆಂಬಲ ನೀಡಬೇಕು ಎಂದು ಕಾರ್ಯಕಾರಿ ಸಮಿತಿ ಮಹಿಳಾ ಮೀಸಲು ಸ್ಥಾನದ ಅಭ್ಯರ್ಥಿ ಸುವರ್ಣಾ ಸುರಕೋಡ ಮನವಿ ಮಾಡಿದರು. </p>.<p>ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 20 ವರ್ಷಗಳಿಂದ ಸಂಘದ ಒಡನಾಟ ಇದೆ. ಸಂಘದ ಕಾನೂನು ಮಂಟಪ, ಶಿಕ್ಷಣ ಮಂಟಪ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಕಾರ್ಯನಿರ್ವಹಿಸಲು ಮತದಾರರು ಅವಕಾಶ ನೀಡಬೇಕು ಎಂದು ಕೋರಿದರು. </p>.<p>ಸಂಘದ ಏಳಿಗೆಗೆ ಶ್ರಮಿಸುವ, ನಾಡು, ನುಡಿಗಾಗಿ ಹೋರಾಡುವ, ಕಲಾವಿದರಿಗೆ ನೆರವು ಕಲ್ಪಿಸುವ, ಸಾಹಿತಿಗಳು ಮತ್ತು ಕಲಾವಿದರಿಗೆ ವೇದಿಕೆ ಕಲ್ಪಿಸುವ, ಹೊರನಾಡು ಮತ್ತು ಗಡಿನಾಡಿನ ಕನ್ನಡಿಗರನ್ನು ರಕ್ಷಿಸುವ ಉದ್ದೇಶ ಹೊಂದಿದ್ದೇನೆ ಎಂದರು. </p>.<p>ಕಾರ್ಯಕಾರಿ ಸಮಿತಿ ಸಾಮಾನ್ಯದ ಸದಸ್ಯ ಸ್ಥಾನದ ಅಭ್ಯರ್ಥಿ ಸಿ.ಎನ್. ಹಿರೇಮಠ ಮಾತನಾಡಿ, ಸಂಘವನ್ನು ರಾಜಕೀಯ ಮುಕ್ತವಾಗಿಸುವ ಮತ್ತು ಪಾರದರ್ಶಕ ಆಡಳಿತ ನಡೆಸುವ ಉದ್ದೇಶ. ಕನ್ನಡ ಶಾಲೆಗಳನ್ನು ಉಳಿಸಲು, ಸರೋಜಿನಿ ಮಹಿಷಿ ವರದಿ ಜಾರಿಗೆ ಹೋರಾಟ ಮಾಡುತ್ತೇನೆ. ಮತದಾರರು ಬೆಂಬಲ ನೀಡಬೇಕು ಎಂದರು.</p>.<p>ಸಂಜೀವ ದಮ್ಮಕನಾಳ, ಹನುಮಾಕ್ಷಿ ಗೋಗಿ, ಮಲ್ಲಮ್ಮ ಭಜಂತ್ರಿ ಸುದ್ದಿಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>