ಎಲೆಕ್ಟ್ರಾನಿಕ್ಸ್ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ, ಇಂಡಿಯಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ ಚೇರಮನ್ ಡಾ.ಸತ್ಯಗುಪ್ತಾ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಶೆಟ್ಟರ್ ಮಾತನಾಡಲಿದ್ದಾರೆ. ನಂತರ ನಡೆಯುವ ಸಂವಾದದಲ್ಲಿ ಡಾ.ನಿತಿನ್ ಕುಲಕರ್ಣಿ, ಶ್ರೀಕೃಷ್ಣ ಜೋಶಿ, ಸಿ.ಎಂ. ಪಾಟೀಲ, ರಾಜೀವ್ ಹಿರೂರ, ವಿಜಯ ಗುಡಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.