15ರಂದು ಬೆಳಿಗ್ಗೆ ದೇವಿ ಮೂರ್ತಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಗಣ ಹೋಮ ಹಾಗೂ ನವಗ್ರಹ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ಉಡಿ ತುಂಬುವ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ಜರುಗಲಿದೆ. ಸಂಜೆ 4 ಗಂಟೆಯಿಂದ ಆರಾಧನಾ ಮಹಿಳಾ ವೃಂದದಿಂದ ಭಕ್ತಿಗೀತೆ ಗಾಯನ, ಸಂಜೆ 5ರಿಂದ ಗಣೇಶ ಮತ್ತು ಸಂಗಡಿಗರಿಂದ ಗೊಂಧಳ ಕಾರ್ಯಕ್ರಮ ಆಯೋಜಿಸಲಾಗಿದೆ.