ರಥೋತ್ಸವ ಸಾಗುತ್ತಿದ್ದಂತೆ ನೂರಾರು ಭಕ್ತರು ಬಾಳೆಹಣ್ಣು, ಉತ್ತತ್ತಿ ಎಸೆದು ಕೈ ಮುಗಿದರು. ನಂತರ ತೊಟ್ಟಿಲು ಸೇವೆ ಸಲ್ಲಿಸಿದ ಎಲ್ಲರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಹಿರಿಯ ದಿವಾಣಿ ನ್ಯಾಯಾಧೀಶ ಜಿ.ಆರ್ ಶೆಟ್ಟರ್, ಬಿಜೆಪಿ ಮುಖಂಡ ಶಶಿಧರ ನಿಂಬಣ್ಣವರ, ವೈ.ಬಿ ದಾಸನಕೊಪ್ಪ, ಗೋವಿಂದಪ್ಪ ಭೋವಿ, ಕೆ.ಟಿ ಚಿಕ್ಕಾಡಿ, ಈಶ್ವರ ಜವಳಿ ಹಾಗೂ ಗ್ರಾಮಸ್ಥರು ಇದ್ದರು.