<p><strong>ಅಳ್ನಾವರ: </strong>ಸಮೀಪದ ವೀರಾಪೂರ ಗ್ರಾಮದ ಆರಾಧ್ಯ ದೇವಿಯರಾದ ಗ್ರಾಮದೇವಿ ಹಾಗೂ ದುರ್ಗಾದೇವಿಯರ ಜಾತ್ರಾ ಮಹೋತ್ಸವ 45 ವರ್ಷಗಳ ನಂತರ ಈಗ ನಡೆಯುತ್ತಿದ್ದು, ಇದೇ 29ರವರೆಗೆ ನಡೆಯಲಿದೆ. ಗ್ರಾಮಸ್ಥರು ದೇವಿಯರ ಆರಾಧನೆಯಲ್ಲಿ ಮಿಂದೆದ್ದು, ಐತಿಹಾಸಿಕ ಮಹೋತ್ಸವದ ಸಂಭ್ರಮದಲ್ಲಿದ್ದಾರೆ.</p>.<p>11 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಬುಧವಾರದಿಂದ ಆರಂಭವಾದ ಹೊನ್ನಾಟ ಮೂರು ದಿನ ನಡೆಯಲಿದೆ. ಹೊನ್ನಾಟಕ್ಕೆ ಭಂಡಾರವೆ ಪ್ರಧಾನ . ದೂರದ ಮಹಾರಾಷ್ಟ್ರದಿಂದ ಐದು ಕ್ವಿಂಟಲ್ ಭಂಡಾರವನ್ನು ಜಾತ್ರಾ ಸಮಿತಿ ತಂದಿದೆ. ಇನ್ನೂ ಹಲವರು ಸ್ವಂತಕ್ಕಾಗಿ ಬೇರೆ ಭಂಡಾರ ತಂದಿದ್ದಾರೆ ಎಂದು ಗ್ರಾಮದ ಈರಣ್ಣ ಮುರಗೋಡ ತಿಳಿಸಿದ್ದಾರೆ.</p>.<p>ಪ್ರತಿ ದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ನಿತ್ಯ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.</p>.<p>ಏ.23 ರಿಂದ ಏ.27 ರವರೆಗೆ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಡಿವಾಳೇಶ್ವರ ದೇವಸ್ಥಾನದ ಪಾದಗಟ್ಟೆಯಲ್ಲಿ ದೇವಿಯರನ್ನು ಕೂಡಿಸಲಾಗುವುದು, ನವ ಚಂಡಿಕಾ ಹೋಮ, ಹವನ, ದೇವಿಯರ ಮಾಂಗಲ್ಯ ಧಾರಣೆ, ದೇವಿಯರ ವಿಶೇಷ ಪೂಜಾ ಕಾಯಕ್ರಮ ನಡೆಯಲಿವೆ.</p>.<p>ದೇವಿಯರಿಗೆ ಕಿತ್ತೂರ ಭಾಗದ ಕಲಾವಿದರು ಬಣ್ಣ ಹಚ್ಚಿ ಜೀವಕಳೆ ತುಂಬಿದ್ದಾರೆ. ಕಲ್ಲಾಪೂರದ ದುಂಡಪ್ಪ ಬಾಗೋಡಿ ಪ್ರತಿ ದಿನ ಸಂಜೆ ಪ್ರವಚನ ನಡೆಸಿಕೊಡುತ್ತಿದ್ದಾರೆ.</p>.<p>ಹೊನ್ನಾಟದಲ್ಲಿ ಗ್ರಾಮಸ್ಥರು ಭಂಡಾರ ಹಚ್ಚಿಕೊಂಡು ದೇವಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ. ಗ್ರಾಮದ ಬೀದಿಗಳು ಭಂಡಾರದ ಹಳದಿ ಬಣ್ಣದಿಂದ ಕೂಡಿವೆ. ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಬಹಳ ವರ್ಷದ ನಂತರ ನಡೆಯುತ್ತಿರುವ ಜಾತ್ರೆಗೆ ಸಮೀಪದ ಮತ್ತು ದೂರದ ಊರಿನಿಂದ ಬೀಗರು ಆಗಮಿಸಿದ್ದಾರೆ.</p>.<p>ಭಕ್ತರಿಗೆ ಪ್ರತಿ ದಿನ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸುಕನ್ಯಾ ಬಡಿಗೇರ ಹಾಗೂ ಕಲ್ಮೇಶ ಬಣ್ಣದೂರಮಠ ಅವರಿಂದ ಪ್ರತಿ ದಿನ ಸಂಜೆ ಸಂಗೀತ ಸೇವೆ ಇರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳ್ನಾವರ: </strong>ಸಮೀಪದ ವೀರಾಪೂರ ಗ್ರಾಮದ ಆರಾಧ್ಯ ದೇವಿಯರಾದ ಗ್ರಾಮದೇವಿ ಹಾಗೂ ದುರ್ಗಾದೇವಿಯರ ಜಾತ್ರಾ ಮಹೋತ್ಸವ 45 ವರ್ಷಗಳ ನಂತರ ಈಗ ನಡೆಯುತ್ತಿದ್ದು, ಇದೇ 29ರವರೆಗೆ ನಡೆಯಲಿದೆ. ಗ್ರಾಮಸ್ಥರು ದೇವಿಯರ ಆರಾಧನೆಯಲ್ಲಿ ಮಿಂದೆದ್ದು, ಐತಿಹಾಸಿಕ ಮಹೋತ್ಸವದ ಸಂಭ್ರಮದಲ್ಲಿದ್ದಾರೆ.</p>.<p>11 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಬುಧವಾರದಿಂದ ಆರಂಭವಾದ ಹೊನ್ನಾಟ ಮೂರು ದಿನ ನಡೆಯಲಿದೆ. ಹೊನ್ನಾಟಕ್ಕೆ ಭಂಡಾರವೆ ಪ್ರಧಾನ . ದೂರದ ಮಹಾರಾಷ್ಟ್ರದಿಂದ ಐದು ಕ್ವಿಂಟಲ್ ಭಂಡಾರವನ್ನು ಜಾತ್ರಾ ಸಮಿತಿ ತಂದಿದೆ. ಇನ್ನೂ ಹಲವರು ಸ್ವಂತಕ್ಕಾಗಿ ಬೇರೆ ಭಂಡಾರ ತಂದಿದ್ದಾರೆ ಎಂದು ಗ್ರಾಮದ ಈರಣ್ಣ ಮುರಗೋಡ ತಿಳಿಸಿದ್ದಾರೆ.</p>.<p>ಪ್ರತಿ ದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ನಿತ್ಯ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.</p>.<p>ಏ.23 ರಿಂದ ಏ.27 ರವರೆಗೆ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಡಿವಾಳೇಶ್ವರ ದೇವಸ್ಥಾನದ ಪಾದಗಟ್ಟೆಯಲ್ಲಿ ದೇವಿಯರನ್ನು ಕೂಡಿಸಲಾಗುವುದು, ನವ ಚಂಡಿಕಾ ಹೋಮ, ಹವನ, ದೇವಿಯರ ಮಾಂಗಲ್ಯ ಧಾರಣೆ, ದೇವಿಯರ ವಿಶೇಷ ಪೂಜಾ ಕಾಯಕ್ರಮ ನಡೆಯಲಿವೆ.</p>.<p>ದೇವಿಯರಿಗೆ ಕಿತ್ತೂರ ಭಾಗದ ಕಲಾವಿದರು ಬಣ್ಣ ಹಚ್ಚಿ ಜೀವಕಳೆ ತುಂಬಿದ್ದಾರೆ. ಕಲ್ಲಾಪೂರದ ದುಂಡಪ್ಪ ಬಾಗೋಡಿ ಪ್ರತಿ ದಿನ ಸಂಜೆ ಪ್ರವಚನ ನಡೆಸಿಕೊಡುತ್ತಿದ್ದಾರೆ.</p>.<p>ಹೊನ್ನಾಟದಲ್ಲಿ ಗ್ರಾಮಸ್ಥರು ಭಂಡಾರ ಹಚ್ಚಿಕೊಂಡು ದೇವಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ. ಗ್ರಾಮದ ಬೀದಿಗಳು ಭಂಡಾರದ ಹಳದಿ ಬಣ್ಣದಿಂದ ಕೂಡಿವೆ. ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಬಹಳ ವರ್ಷದ ನಂತರ ನಡೆಯುತ್ತಿರುವ ಜಾತ್ರೆಗೆ ಸಮೀಪದ ಮತ್ತು ದೂರದ ಊರಿನಿಂದ ಬೀಗರು ಆಗಮಿಸಿದ್ದಾರೆ.</p>.<p>ಭಕ್ತರಿಗೆ ಪ್ರತಿ ದಿನ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸುಕನ್ಯಾ ಬಡಿಗೇರ ಹಾಗೂ ಕಲ್ಮೇಶ ಬಣ್ಣದೂರಮಠ ಅವರಿಂದ ಪ್ರತಿ ದಿನ ಸಂಜೆ ಸಂಗೀತ ಸೇವೆ ಇರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>