‘2ನೇ ಅವಧಿಗೆ ಮೇಯರ್– ಉಪ ಮೇಯರ್ ಚನಾವಣೆ ವೇಳೆ ಆಗಿನ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಕಪಕಟರ್ ಅವರು ಪಕ್ಷದ ವತಿಯಿಂದ ಬಿಜೆಪಿಯ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದರು. ಆದರೆ, ಚುನಾವಣೆ ವೇಳೆ ಪಕ್ಷದ ಸದಸ್ಯೆ ಸರಸ್ವತಿ ವಿನಾಯಕ ಧೋಂಗಡಿ ಅವರು ಗೈರಾಗಿದ್ದರು. ಪಕ್ಷದ ವಿಪ್ ಉಲ್ಲಂಘನೆ ಹಿನ್ನೆಲೆಯಲ್ಲಿ ಸಂಜಯ ಕಪಟಕರ ಅವರು ಪಾಲಿಕೆಯ ಆಯುಕ್ತರಿಗೆ ದೂರು ನೀಡಿದ್ದರು. ವಿಚಾರಣೆ ನಂತರ ಅವರ ಸದಸ್ಯತ್ವ ರದ್ದಾಗಿದೆ’ ಎಂದು ಹು-ಧಾ ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ’ಪ್ರಜಾವಾಣಿ’ಗೆ ತಿಳಿಸಿದರು.