ಸಭಾ ಕಾರ್ಯಕ್ರಮಕ್ಕೂ ಮುನ್ನ ಶೋಭಾಯಾತ್ರೆ ಮೂಲಕ ಪೇಜಾವರ ಶ್ರೀಗಳಿಗೆ ನೀಡಿದ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಮೆರವಣಿಗೆಯಲ್ಲಿ ಕಲ್ಯಾಣ ಮಂಟಪಕ್ಕೆ ತರಲಾಯಿತು.ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್, ಬದರಿ ಆಚಾರ್ಯ, ಅನಂತರಾಜ ಭಟ್, ಕೃಷ್ಣರಾಜ ಕೆಮ್ತೂರ, ಶ್ರೀಕಾಂತ ಕೆಮ್ತೂರ, ಎ.ಸಿ. ಗೋಪಾಲ, ಡಾ. ಎಚ್. ನಾಡಗೌಡ, ವಿನಾಯಕ ಆಕಳವಾಡಿ, ಸತ್ಯಮೂರ್ತಿ ಆಚಾರ್ಯ, ವಸಂತ ನಾಡಜೋಶಿ, ರಾಘವೇಂದ್ರ ನಂಜನಗೂಡ, ಗೋಪಾಲ ಕುಲಕರ್ಣಿ, ಶ್ರೀಧರ ವಿ.ಎನ್. ಇದ್ದರು.