ಹುಬ್ಬಳ್ಳಿ:ಕೊರೊನಾ ವೈರಸ್ ನಿರ್ಮೂಲನೆಗಾಗಿ ದೇಶದಲ್ಲಿ ವಿಧಿಸಿರುವ 21 ದಿನಗಳ ಲಾಕ್ಡೌನ್ ವೇಳೆ ಸಹಾಯದ ಅಗತ್ಯ ಇರುವವರಿಗೆ ನೆರವಾಗಲು ಇಚ್ಛಿಸುವ ಸ್ವಯಂ ಸೇವಾ ಸಂಸ್ಥೆಗಳು ಮತ್ತು ದಾನಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬಹುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾನಿಗಳು ಆಹಾರ, ಬಟ್ಟೆ, ಮಾಸ್ಕ್, ಸ್ಯಾನಿಟೈಸರ್, ತರಕಾರಿ, ಹಣ್ಣು ನೀಡಬಹುದಾಗಿದೆ. ಶ್ರಮದಾನಕ್ಕೂ ಅವಕಾಶವಿದೆ.
ಆಸಕ್ತರು ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ನೆರವು ನೀಡಬಹುದಾದ ವಸ್ತುಗಳು ಅಥವಾ ಸ್ವಯಂಸೇವೆಯ ವಿವರಗಳನ್ನು ನಿಗದಿತ ನೋಂದಣಿ ನಮೂನೆಯಲ್ಲಿ ಭರ್ತಿ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ವಿವರಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರನ್ನು(ಮೊ 94800 042112) ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.