ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಜೈಲಿನಿಂದ ಬೆದರಿಕೆ ಒಡ್ಡುವುದು, ಮತದಾರರ ಹಾಗೂ ಕಾರ್ಯಕರ್ತರಲ್ಲಿ ಭಯದ ವಾತಾವರಣ ಮೂಡಿಸುವುದನ್ನು ಗುಂಡಾಶಕ್ತಿಗಳು ಮಾಡಿಕೊಂಡೇ ಬಂದಿವೆ. ಇದನ್ನು ತಹಬಂದಿಗೆ ತಂದಿದ್ದೇವೆ. ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿದ್ದೇವೆ. ಜನಶಕ್ತಿಯ ಮುಂದೆ ಗುಂಡಾಗಳ ಶಕ್ತಿ ನಡೆಯುವುದಿಲ್ಲ’ ಎಂದರು.