ಪವಿತ್ರತೆ ಕಾಪಾಡಬೇಕು: ‘ರಾಜ್ಯದಲ್ಲ ಪಶ್ಚಿಮ ಶಿಕ್ಷಕರ ಕ್ಷೇತ್ರವು ಪವಿತ್ರವಾದುದು. ಆದರೆ, ಈ ಸಲದ ಚುನಾವಣೆಯಲ್ಲಿ ಕೆಲವರು ಶಿಕ್ಷಕರಿಗೆ ಪಾರ್ಟಿ ಆಯೋಜಿಸಿ, ವಸತಿ ವ್ಯವಸ್ಥೆ ಮಾಡಿದ್ದು ಮನಸ್ಸಿಗೆ ನೋವುಂಟು ಮಾಡಿದೆ. ಅನರ್ಹ ಮತಗಳು ಸಾವಿರ ದಾಟಿದ್ದು ದಿಗ್ಬ್ರಮೆ ಹುಟ್ಟಿಸಿತು. ನಾನು ಸೋತಿದ್ದರೂ ಪರವಾಗಿಲ್ಲ. ಇಂತಹದ್ದು ನಡೆಯಬಾರದಿತ್ತು. ಶಿಕ್ಷಕರು ಪ್ರಬುದ್ಧ ಮತದಾರರು ಎಂಬ ಮಾತನ್ನು ಉಳಿಸಿಕೊಳ್ಳಬೇಕು. ಕ್ಷೇತ್ರದ ಪವಿತ್ರತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.