<p><strong>ಧಾರವಾಡ: </strong> `ಕನ್ನಡದ ಕುಲಪುರೋಹಿತ ಎಂದೇ ಖ್ಯಾತಿ ಪಡೆದಿದ್ದ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳವಳಿಗೆ ಧುಮುಕಲು, ಬಂಗಾಳವನ್ನು ಪ್ರತ್ಯೇಕಿಸುವ ಬ್ರಿಟಿಷರ ಪ್ರಯತ್ನ ವಿರೋಧಿಸಿ ನಡೆದ ವಂಗಭಂಗ ಚಳವಳಿ ಕಾರಣವಾಗಿತ್ತು~ ಎಂದು ಹಿರಿಯ ಕವಿ ಡಾ.ಚನ್ನವೀರ ಕಣವಿ ಹೇಳಿದರು. <br /> <br /> `ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್~ ಗುರುವಾರ ಏರ್ಪಡಿಸಿದ್ದ ಆಲೂರು ವೆಂಕಟರಾವ್ ಅವರ 132ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಇತಿಹಾಸಜ್ಞರ ದಿನಾಚರಣೆ ಕಾರ್ಯಕ್ರಮದಲ್ಲಿ ಆಲೂರರ ಕುರಿತು ವಾರ್ತಾ ಇಲಾಖೆ ಹೊರತಂದ ಸಾಕ್ಷ್ಯಚಿತ್ರದ ಸಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು. <br /> <br /> ಕರ್ನಾಟಕದ ಸರ್ವಾಂಗೀಣ ಉನ್ನತಿ~ ಎಂಬುದು ಆಲೂರರ ಮೂಲಮಂತ್ರವಾಗಿತ್ತು. ಈ ಮಾತನ್ನು ಅವರು ತಮ್ಮ `ಜೀವನ ಸ್ಮೃತಿ~ ಕೃತಿಯಲ್ಲಿ ದಾಖಲಿಸಿದ್ದಾರೆ. `ಜಯಕರ್ನಾಟಕ ಪತ್ರಿಕೆಯ~ ಗುರಿ ಕರ್ನಾಟಕ ಏಕೀಕರಣಗೊಳಿಸುವುದು ಎಂಬುದನ್ನು ಘೋಷಿಸಿದ್ದರು. ಈ ಪತ್ರಿಕೆ ಆ ಕಾಲದಲ್ಲಿ ಯಾವ ಪತ್ರಿಕೆಯಲ್ಲೂ ಇರದಷ್ಟು ಮಾಹಿತಿಯನ್ನು ಹೊಂದಿರುತ್ತಿತ್ತು.<br /> <br /> `ನಾನು ಸಾಹಿತಿಯಲ್ಲ~ ಎನ್ನುತ್ತಲೇ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ದುಡಿದ ಅವರು, 1930ರಲ್ಲಿ ಮೈಸೂರಿನಲ್ಲಿ ನಡೆದ 16ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು. ಆದರೆ ಬೆಂಗಳೂರಿಗರಿಗೇ ಮಣೆ ಹಾಕುವ ಪದಾಧಿಕಾರಿಗಳ ವೈಖರಿ ಖಂಡಿಸಿ ಪರಷತ್ತಿಗೆ ರಾಜೀನಾಮೆಯನ್ನೂ ನೀಡಿದ್ದರು ಎಂದರು.<br /> <br /> ಟ್ರಸ್ಟ್ನ ಸದಸ್ಯ ಪಿ.ಬಿ.ಗಾಯಿ ಟ್ರಸ್ಟ್ ಕೈಗೊಳ್ಳಬೇಕಾದ ಕಾರ್ಯಗಳನ್ನು ವಿವರಿಸಿದರು. ಸದಸ್ಯ ಕಾರ್ಯದರ್ಶಿ ಬಿ.ಡಿ.ಹಿರೇಗೌಡರ ಸ್ವಾಗತಿಸಿದರು. ಸದಸ್ಯ ದೀಪಕ ಆಲೂರ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ: </strong> `ಕನ್ನಡದ ಕುಲಪುರೋಹಿತ ಎಂದೇ ಖ್ಯಾತಿ ಪಡೆದಿದ್ದ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳವಳಿಗೆ ಧುಮುಕಲು, ಬಂಗಾಳವನ್ನು ಪ್ರತ್ಯೇಕಿಸುವ ಬ್ರಿಟಿಷರ ಪ್ರಯತ್ನ ವಿರೋಧಿಸಿ ನಡೆದ ವಂಗಭಂಗ ಚಳವಳಿ ಕಾರಣವಾಗಿತ್ತು~ ಎಂದು ಹಿರಿಯ ಕವಿ ಡಾ.ಚನ್ನವೀರ ಕಣವಿ ಹೇಳಿದರು. <br /> <br /> `ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್~ ಗುರುವಾರ ಏರ್ಪಡಿಸಿದ್ದ ಆಲೂರು ವೆಂಕಟರಾವ್ ಅವರ 132ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಇತಿಹಾಸಜ್ಞರ ದಿನಾಚರಣೆ ಕಾರ್ಯಕ್ರಮದಲ್ಲಿ ಆಲೂರರ ಕುರಿತು ವಾರ್ತಾ ಇಲಾಖೆ ಹೊರತಂದ ಸಾಕ್ಷ್ಯಚಿತ್ರದ ಸಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು. <br /> <br /> ಕರ್ನಾಟಕದ ಸರ್ವಾಂಗೀಣ ಉನ್ನತಿ~ ಎಂಬುದು ಆಲೂರರ ಮೂಲಮಂತ್ರವಾಗಿತ್ತು. ಈ ಮಾತನ್ನು ಅವರು ತಮ್ಮ `ಜೀವನ ಸ್ಮೃತಿ~ ಕೃತಿಯಲ್ಲಿ ದಾಖಲಿಸಿದ್ದಾರೆ. `ಜಯಕರ್ನಾಟಕ ಪತ್ರಿಕೆಯ~ ಗುರಿ ಕರ್ನಾಟಕ ಏಕೀಕರಣಗೊಳಿಸುವುದು ಎಂಬುದನ್ನು ಘೋಷಿಸಿದ್ದರು. ಈ ಪತ್ರಿಕೆ ಆ ಕಾಲದಲ್ಲಿ ಯಾವ ಪತ್ರಿಕೆಯಲ್ಲೂ ಇರದಷ್ಟು ಮಾಹಿತಿಯನ್ನು ಹೊಂದಿರುತ್ತಿತ್ತು.<br /> <br /> `ನಾನು ಸಾಹಿತಿಯಲ್ಲ~ ಎನ್ನುತ್ತಲೇ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ದುಡಿದ ಅವರು, 1930ರಲ್ಲಿ ಮೈಸೂರಿನಲ್ಲಿ ನಡೆದ 16ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು. ಆದರೆ ಬೆಂಗಳೂರಿಗರಿಗೇ ಮಣೆ ಹಾಕುವ ಪದಾಧಿಕಾರಿಗಳ ವೈಖರಿ ಖಂಡಿಸಿ ಪರಷತ್ತಿಗೆ ರಾಜೀನಾಮೆಯನ್ನೂ ನೀಡಿದ್ದರು ಎಂದರು.<br /> <br /> ಟ್ರಸ್ಟ್ನ ಸದಸ್ಯ ಪಿ.ಬಿ.ಗಾಯಿ ಟ್ರಸ್ಟ್ ಕೈಗೊಳ್ಳಬೇಕಾದ ಕಾರ್ಯಗಳನ್ನು ವಿವರಿಸಿದರು. ಸದಸ್ಯ ಕಾರ್ಯದರ್ಶಿ ಬಿ.ಡಿ.ಹಿರೇಗೌಡರ ಸ್ವಾಗತಿಸಿದರು. ಸದಸ್ಯ ದೀಪಕ ಆಲೂರ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>