<p><strong>ಧಾರವಾಡ:</strong> `ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಥೆ ಅತ್ಯಂತ ಜನಪ್ರಿಯ ಪ್ರಕಾರ. ಕಥೆಗಳು ಓದುವವರ ತಿಳಿವಳಿಕೆ, ಅರಿವನ್ನು ವಿಸ್ತಾರಗೊಳಿಸುವುದರ ಜೊತೆ ಜೀವ ನೀಡುವ ಶಕ್ತಿ ಇದೆ' ಎಂದು ಹಿರಿಯ ಕಥೆಗಾರ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಅಭಿಪ್ರಾಯಪಟ್ಟರು.<br /> <br /> ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ ಪತ್ರಕರ್ತ ಕುಮಾರ ಬೇಂದ್ರೆ ಅವರ ಕಥಾಸಂಕಲನ `ಗಾಂಧಿ ವೃತ್ತದ ದಂಗೆ' ಬಿಡುಗಡೆಗೊಳಿಸಿ ಅವರು ಮಾತನಾಡಿದರು.<br /> <br /> `ಪ್ರತಿಯೊಬ್ಬ ಕಥೆಗಾರ ತನ್ನ ವೈಯಕ್ತಿಕ ಅನುಭವಗಳನ್ನು ಸಾರ್ವತ್ರೀಕರಣಗೊಳಿಸಿ ಕಥೆ ಸೃಷ್ಟಿಸುತ್ತಾನೆ.<br /> <br /> ಓದುಗ ತನ್ನ ಓದುವ ಸುಖಕ್ಕಾಗಿ ಕಥೆಗಳನ್ನು ಓದುತ್ತಾನೆ. ಹೀಗೆ ಓದುವ ಮೂಲಕ ಬೇರೊಬ್ಬರ ಪ್ರಪಂಚವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಹೀಗೆ ನಿರಂತರ ನಡೆಯುವ ಶೋಧನೆಯ ಫಲವಾಗಿ ಕಥೆಗಳು ಹುಟ್ಟುತ್ತವೆ. ಕನ್ನಡ ಸಾಹಿತ್ಯದಲ್ಲಿ ಕಥೆಗಳಿಗೆ ಒಂದು ವಿಶಿಷ್ಟ ಪರಂಪರೆ ಇದೆ' ಎಂದರು.<br /> <br /> `ಕಥೆಗಳ ಸ್ವರೂಪ ಭಾವಗೀತೆ ಮತ್ತು ಪ್ರಬಂಧ ಪ್ರಕಾರಗಳಿಗೆ ತುಂಬಾ ಹತ್ತಿರವಾದದ್ದು. ಕಥೆಗಳಲ್ಲಿ ಸೀಮಿತ ಚೌಕಟ್ಟಿನಲ್ಲಿ ರೂಪಿಸುವ ಸವಾಲು ಕಥೆಗಾರನ ಮುಂದಿರುವುದರಿಂದ ಚಿಕ್ಕ, ಚಿಕ್ಕ ಸಂಗತಿಗಳನ್ನು, ಬದುಕಿನ ಮಗ್ಗಲುಗಳನ್ನು ಆ ಚೌಕಟ್ಟಿನಲ್ಲಿಯೇ ಕೇಂದ್ರೀಕರಿಸುತ್ತಾನೆ. ಹೀಗಾಗಿ ಕಥೆಗಳಿಗೆ ತೀವ್ರತೆ ಸಾಧ್ಯವಾಗುತ್ತದೆ.<br /> <br /> ನವೋದಯ, ನವ್ಯ, ಬಂಡಾಯದ ಕಾಲಘಟ್ಟದಲ್ಲಿ ಕಥೆಗಳ ಆಶಯ, ಸಂರಚನೆ ಬದಲಾವಣೆ ಹೊಂದುತ್ತ ಬಂದವು. ಪ್ರಸ್ತುತ ಸಂದರ್ಭದಲ್ಲಿ ಎಲ್ಲ ಕಾಲಘಟ್ಟಗಳ ಉತ್ತಮ ಅಂಶಗಳನ್ನು ಸ್ವೀಕರಿಸುತ್ತ, ಹೊಸತನ ಸೃಷ್ಟಿಸುತ್ತ ಕಥಾಪರಂಪರೆಯನ್ನು ಮುಂದುವರಿಸಬೇಕಿದೆ. ಸಮಕಾಲೀನ ಸಂವೇದನೆಗಳನ್ನು ಕಥಾ ಅನುಭವವನ್ನಾಗಿಸಿಕೊಳ್ಳಬೇಕಿದೆ' ಎಂದು ಹೇಳಿದರು.<br /> <br /> ಕೃತಿ ಪರಿಚಯಿಸಿದ ಚನ್ನಪ್ಪ ಅಂಗಡಿ, `ಪ್ರಾಚೀನ ಮೌಖಿಕ ಪರಂಪರೆಯೇ ಆಧುನಿಕ ಕಥಾ ಪರಂಪರೆಗೆ ದ್ರವ್ಯ. ಪ್ರಸ್ತುತ ಅನ್ಯಶಿಸ್ತೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ತಮ್ಮ ವಿಭಿನ್ನ ಅನುಭವಗಳನ್ನು ಕ್ರೋಢೀಕರಿಸಿಕೊಂಡು ಕಥಾ ರಚನೆಯಲ್ಲಿ ತೊಡಗಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ಕುಮಾರ ಬೇಂದ್ರೆ ಅವರ ಕಥೆಗಳು ಆಶಾಭಾವನೆ ಮೂಡಿಸುತ್ತವೆ' ಎಂದರು.<br /> <br /> ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಾಹಿತ್ಯ ಮಂಟಪದ ಸಂಚಾಲಕ ಮೋಹನ ನಾಗಮ್ಮನವರ, ಶಿವಣ್ಣ ಬೆಲ್ಲದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> `ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಥೆ ಅತ್ಯಂತ ಜನಪ್ರಿಯ ಪ್ರಕಾರ. ಕಥೆಗಳು ಓದುವವರ ತಿಳಿವಳಿಕೆ, ಅರಿವನ್ನು ವಿಸ್ತಾರಗೊಳಿಸುವುದರ ಜೊತೆ ಜೀವ ನೀಡುವ ಶಕ್ತಿ ಇದೆ' ಎಂದು ಹಿರಿಯ ಕಥೆಗಾರ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಅಭಿಪ್ರಾಯಪಟ್ಟರು.<br /> <br /> ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ ಪತ್ರಕರ್ತ ಕುಮಾರ ಬೇಂದ್ರೆ ಅವರ ಕಥಾಸಂಕಲನ `ಗಾಂಧಿ ವೃತ್ತದ ದಂಗೆ' ಬಿಡುಗಡೆಗೊಳಿಸಿ ಅವರು ಮಾತನಾಡಿದರು.<br /> <br /> `ಪ್ರತಿಯೊಬ್ಬ ಕಥೆಗಾರ ತನ್ನ ವೈಯಕ್ತಿಕ ಅನುಭವಗಳನ್ನು ಸಾರ್ವತ್ರೀಕರಣಗೊಳಿಸಿ ಕಥೆ ಸೃಷ್ಟಿಸುತ್ತಾನೆ.<br /> <br /> ಓದುಗ ತನ್ನ ಓದುವ ಸುಖಕ್ಕಾಗಿ ಕಥೆಗಳನ್ನು ಓದುತ್ತಾನೆ. ಹೀಗೆ ಓದುವ ಮೂಲಕ ಬೇರೊಬ್ಬರ ಪ್ರಪಂಚವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಹೀಗೆ ನಿರಂತರ ನಡೆಯುವ ಶೋಧನೆಯ ಫಲವಾಗಿ ಕಥೆಗಳು ಹುಟ್ಟುತ್ತವೆ. ಕನ್ನಡ ಸಾಹಿತ್ಯದಲ್ಲಿ ಕಥೆಗಳಿಗೆ ಒಂದು ವಿಶಿಷ್ಟ ಪರಂಪರೆ ಇದೆ' ಎಂದರು.<br /> <br /> `ಕಥೆಗಳ ಸ್ವರೂಪ ಭಾವಗೀತೆ ಮತ್ತು ಪ್ರಬಂಧ ಪ್ರಕಾರಗಳಿಗೆ ತುಂಬಾ ಹತ್ತಿರವಾದದ್ದು. ಕಥೆಗಳಲ್ಲಿ ಸೀಮಿತ ಚೌಕಟ್ಟಿನಲ್ಲಿ ರೂಪಿಸುವ ಸವಾಲು ಕಥೆಗಾರನ ಮುಂದಿರುವುದರಿಂದ ಚಿಕ್ಕ, ಚಿಕ್ಕ ಸಂಗತಿಗಳನ್ನು, ಬದುಕಿನ ಮಗ್ಗಲುಗಳನ್ನು ಆ ಚೌಕಟ್ಟಿನಲ್ಲಿಯೇ ಕೇಂದ್ರೀಕರಿಸುತ್ತಾನೆ. ಹೀಗಾಗಿ ಕಥೆಗಳಿಗೆ ತೀವ್ರತೆ ಸಾಧ್ಯವಾಗುತ್ತದೆ.<br /> <br /> ನವೋದಯ, ನವ್ಯ, ಬಂಡಾಯದ ಕಾಲಘಟ್ಟದಲ್ಲಿ ಕಥೆಗಳ ಆಶಯ, ಸಂರಚನೆ ಬದಲಾವಣೆ ಹೊಂದುತ್ತ ಬಂದವು. ಪ್ರಸ್ತುತ ಸಂದರ್ಭದಲ್ಲಿ ಎಲ್ಲ ಕಾಲಘಟ್ಟಗಳ ಉತ್ತಮ ಅಂಶಗಳನ್ನು ಸ್ವೀಕರಿಸುತ್ತ, ಹೊಸತನ ಸೃಷ್ಟಿಸುತ್ತ ಕಥಾಪರಂಪರೆಯನ್ನು ಮುಂದುವರಿಸಬೇಕಿದೆ. ಸಮಕಾಲೀನ ಸಂವೇದನೆಗಳನ್ನು ಕಥಾ ಅನುಭವವನ್ನಾಗಿಸಿಕೊಳ್ಳಬೇಕಿದೆ' ಎಂದು ಹೇಳಿದರು.<br /> <br /> ಕೃತಿ ಪರಿಚಯಿಸಿದ ಚನ್ನಪ್ಪ ಅಂಗಡಿ, `ಪ್ರಾಚೀನ ಮೌಖಿಕ ಪರಂಪರೆಯೇ ಆಧುನಿಕ ಕಥಾ ಪರಂಪರೆಗೆ ದ್ರವ್ಯ. ಪ್ರಸ್ತುತ ಅನ್ಯಶಿಸ್ತೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ತಮ್ಮ ವಿಭಿನ್ನ ಅನುಭವಗಳನ್ನು ಕ್ರೋಢೀಕರಿಸಿಕೊಂಡು ಕಥಾ ರಚನೆಯಲ್ಲಿ ತೊಡಗಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ಕುಮಾರ ಬೇಂದ್ರೆ ಅವರ ಕಥೆಗಳು ಆಶಾಭಾವನೆ ಮೂಡಿಸುತ್ತವೆ' ಎಂದರು.<br /> <br /> ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಾಹಿತ್ಯ ಮಂಟಪದ ಸಂಚಾಲಕ ಮೋಹನ ನಾಗಮ್ಮನವರ, ಶಿವಣ್ಣ ಬೆಲ್ಲದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>