<p>ಧಾರವಾಡ: ಮನುಷ್ಯನಿಗೆ ಜೀವದಾನ ನೀಡುವ ಶಕ್ತಿ ಇರುವುದು ರಕ್ತಕ್ಕೆ ಇದೆ. ಇಂಥ ರಕ್ತದಾನ ಶ್ರೇಷ್ಠವಾದುದು ಎಂದು ಜಿಲ್ಲಾ ಸರ್ಜನ್ ಡಾ. ವಿಜಯ ವಿಠ್ಠಲ ಮನಗೂಳಿ ಹೇಳಿದರು. <br /> <br /> ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಕ್ರಿಕೆಟ್ ಆಟಗಾರ ಪರೇಶ ನೆರ್ಲೇಕರ ಅವರ ಪ್ರಥಮ ಪುಣ್ಯಸ್ಮರಣೆ ಸ್ಮರಣಾರ್ಥ ಆತನ ಗೆಳೆಯರ ಬಳಗದವರು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಆತ್ಮಕ್ಕೆ ನಿಜವಾಗಿಯೂ ಶಾಂತಿ ಸಿಗುವುದು ಇಂಥ ಜೀವನ್ಮುಖಿ ಕಾರ್ಯಕ್ರಮಗಳಿಂದ ಎಂದರು. <br /> <br /> ಇಂದಿನ ಯುವಜನಾಂಗದ ಚಿಂತನೆ ಧಾಟಿ ಬದಲಾಗುತ್ತಿದೆ. ಸಮಾಜಮುಖಿ ಕಾರ್ಯಗಳತ್ತ, ಸತ್ಕಾರ್ಯಗಳತ್ತ ಯುವಕರು ಮುಂದಾಗುತ್ತಿದ್ದಾರೆ ಎಂದು ಹೇಳಿದರು. <br /> <br /> ಎಸ್ಡಿಎಂ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ನೀಧಜಕುಮಾರ ಜೈನ್, ಪತ್ರಕರ್ತ ವಿರೂಪಾಕ್ಷ ಹಲಕರ್ಣಿಮಠ ಮಾತನಾಡಿದರು. ಪ್ರಮೋದ ನಾಯ್ಕ, ಡಾ. ಅಚ್ಯುತ್, ಡಾ. ಕುಕನೂರ, ರವಿ ಬೇದರೆ, ಪ್ರಕಾಶ ಪೂಜಾರ, ಮೃತ್ಯುಂಜಯ ಬನವಾಸಿ, ಮಹಮ್ಮದ್ರಫಿ ಗಡವಾಲ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ಮನುಷ್ಯನಿಗೆ ಜೀವದಾನ ನೀಡುವ ಶಕ್ತಿ ಇರುವುದು ರಕ್ತಕ್ಕೆ ಇದೆ. ಇಂಥ ರಕ್ತದಾನ ಶ್ರೇಷ್ಠವಾದುದು ಎಂದು ಜಿಲ್ಲಾ ಸರ್ಜನ್ ಡಾ. ವಿಜಯ ವಿಠ್ಠಲ ಮನಗೂಳಿ ಹೇಳಿದರು. <br /> <br /> ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಕ್ರಿಕೆಟ್ ಆಟಗಾರ ಪರೇಶ ನೆರ್ಲೇಕರ ಅವರ ಪ್ರಥಮ ಪುಣ್ಯಸ್ಮರಣೆ ಸ್ಮರಣಾರ್ಥ ಆತನ ಗೆಳೆಯರ ಬಳಗದವರು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಆತ್ಮಕ್ಕೆ ನಿಜವಾಗಿಯೂ ಶಾಂತಿ ಸಿಗುವುದು ಇಂಥ ಜೀವನ್ಮುಖಿ ಕಾರ್ಯಕ್ರಮಗಳಿಂದ ಎಂದರು. <br /> <br /> ಇಂದಿನ ಯುವಜನಾಂಗದ ಚಿಂತನೆ ಧಾಟಿ ಬದಲಾಗುತ್ತಿದೆ. ಸಮಾಜಮುಖಿ ಕಾರ್ಯಗಳತ್ತ, ಸತ್ಕಾರ್ಯಗಳತ್ತ ಯುವಕರು ಮುಂದಾಗುತ್ತಿದ್ದಾರೆ ಎಂದು ಹೇಳಿದರು. <br /> <br /> ಎಸ್ಡಿಎಂ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ನೀಧಜಕುಮಾರ ಜೈನ್, ಪತ್ರಕರ್ತ ವಿರೂಪಾಕ್ಷ ಹಲಕರ್ಣಿಮಠ ಮಾತನಾಡಿದರು. ಪ್ರಮೋದ ನಾಯ್ಕ, ಡಾ. ಅಚ್ಯುತ್, ಡಾ. ಕುಕನೂರ, ರವಿ ಬೇದರೆ, ಪ್ರಕಾಶ ಪೂಜಾರ, ಮೃತ್ಯುಂಜಯ ಬನವಾಸಿ, ಮಹಮ್ಮದ್ರಫಿ ಗಡವಾಲ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>