<p>ಬೆಂಗಳೂರು: 'ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದಲ್ಲಿ ಎಲ್ಲ ಅಡೆತಡೆಗಳು ಕಣ್ಮರೆಯಾಗುತ್ತವೆ. ಬುದ್ಧಿವಂತಿಕೆಯು ಜ್ಞಾನದ ಪ್ರತೀಕವಾಗಿ ಪ್ರಜ್ವಲಿಸುತ್ತದೆ' ಎಂದು ಸಹಜ ಸ್ಮೃತಿ ಯೋಗದ ಪ್ರತಿಪಾದಕ ಗುರೂಜಿ ನಂದಕಿಶೋರ್ ತಿವಾರಿ ತಿಳಿಸಿದರು.</p>.<p>ದರ್ಪಣ ಫೌಂಡೇಷನ್ ಗುರು ಪೂರ್ಣಿಮೆ ಅಂಗವಾಗಿ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಸ್ಟಡೀಸ್ನ ಸ್ಥಾಪಕ ಮತ್ತು ವೈದಿಕ ವಿದ್ವಾಂಸ ಡೇವಿಡ್ ಫ್ರಾಲೀ ಅವರೊಂದಿಗೆ ಭಾನುವಾರ ಏರ್ಪಡಿಸಿದ್ದ ಫೇಸ್ಬುಕ್ ನೇರಪ್ರಸಾರದ ಚರ್ಚೆಯಲ್ಲಿ ಅವರು ಮಾತನಾಡಿದರು.</p>.<p>'ಪ್ರಸ್ತುತ ನಾವು ಸಾಂಕ್ರಾಮಿಕ, ಮಾನವ ನಡವಳಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ಸ್ಥಿತಿಯಲ್ಲಿ ಸರಿಯಾದ ಶಿಕ್ಷಣ ಅಗತ್ಯ. ಇದರಿಂದ ಭವಿಷ್ಯದ ಪೀಳಿಗೆಯು ಮುಕ್ತ, ಸಂತೋಷ ಹಾಗೂ ಶಾಂತಿಯುತವಾಗಿ ಇರಲಿದೆ' ಎಂದರು.</p>.<p>ಶಿಕ್ಷಣದ ಮಹತ್ವದ ಬಗ್ಗೆ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ ಡೇವಿಡ್ ಫ್ರ್ಯಾಲೀ, 'ಹೊರಗಿನ ನೋಟ ನೋಡುತ್ತಾ ನಾವು ಆಂತರಿಕ ವಾಸ್ತವವನ್ನೇ ನಿರ್ಲಕ್ಷಿಸಿದ್ದೇವೆ. ಪ್ರಶ್ನೆಗಳನ್ನು ಕೇಳಲು, ಆಂತರಿಕ ವಾಸ್ತವಕ್ಕೆ ತೆರಳಲು ಮಕ್ಕಳನ್ನುಪ್ರೋತ್ಸಾಹಿಸಬೇಕು' ಎಂದು ಕಿವಿಮಾತು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: 'ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದಲ್ಲಿ ಎಲ್ಲ ಅಡೆತಡೆಗಳು ಕಣ್ಮರೆಯಾಗುತ್ತವೆ. ಬುದ್ಧಿವಂತಿಕೆಯು ಜ್ಞಾನದ ಪ್ರತೀಕವಾಗಿ ಪ್ರಜ್ವಲಿಸುತ್ತದೆ' ಎಂದು ಸಹಜ ಸ್ಮೃತಿ ಯೋಗದ ಪ್ರತಿಪಾದಕ ಗುರೂಜಿ ನಂದಕಿಶೋರ್ ತಿವಾರಿ ತಿಳಿಸಿದರು.</p>.<p>ದರ್ಪಣ ಫೌಂಡೇಷನ್ ಗುರು ಪೂರ್ಣಿಮೆ ಅಂಗವಾಗಿ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಸ್ಟಡೀಸ್ನ ಸ್ಥಾಪಕ ಮತ್ತು ವೈದಿಕ ವಿದ್ವಾಂಸ ಡೇವಿಡ್ ಫ್ರಾಲೀ ಅವರೊಂದಿಗೆ ಭಾನುವಾರ ಏರ್ಪಡಿಸಿದ್ದ ಫೇಸ್ಬುಕ್ ನೇರಪ್ರಸಾರದ ಚರ್ಚೆಯಲ್ಲಿ ಅವರು ಮಾತನಾಡಿದರು.</p>.<p>'ಪ್ರಸ್ತುತ ನಾವು ಸಾಂಕ್ರಾಮಿಕ, ಮಾನವ ನಡವಳಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ಸ್ಥಿತಿಯಲ್ಲಿ ಸರಿಯಾದ ಶಿಕ್ಷಣ ಅಗತ್ಯ. ಇದರಿಂದ ಭವಿಷ್ಯದ ಪೀಳಿಗೆಯು ಮುಕ್ತ, ಸಂತೋಷ ಹಾಗೂ ಶಾಂತಿಯುತವಾಗಿ ಇರಲಿದೆ' ಎಂದರು.</p>.<p>ಶಿಕ್ಷಣದ ಮಹತ್ವದ ಬಗ್ಗೆ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ ಡೇವಿಡ್ ಫ್ರ್ಯಾಲೀ, 'ಹೊರಗಿನ ನೋಟ ನೋಡುತ್ತಾ ನಾವು ಆಂತರಿಕ ವಾಸ್ತವವನ್ನೇ ನಿರ್ಲಕ್ಷಿಸಿದ್ದೇವೆ. ಪ್ರಶ್ನೆಗಳನ್ನು ಕೇಳಲು, ಆಂತರಿಕ ವಾಸ್ತವಕ್ಕೆ ತೆರಳಲು ಮಕ್ಕಳನ್ನುಪ್ರೋತ್ಸಾಹಿಸಬೇಕು' ಎಂದು ಕಿವಿಮಾತು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>