ಮೊದಲ ದಿನ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ಜೈಲ್ ವೃತ್ತ, ತನಿಷ್ಕ, ನಾಗರಾಜ್ ನ್ಯೂರೋ ಆಸ್ಪತ್ರೆ, ರತ್ನಾ ಆರ್ಕೆಡ್ ಬಳಿ ಕಾರ್ಯಾಚರಣೆ ನೆಡೆಯಿತು. ಪಾದಾಚಾರಿ ರಸ್ತೆಯ ಮೇಲೆ ವಾಹನ ನಿಲ್ಲಿಸದಂತೆ ಹಾಗೂ ಪಾದಾಚಾರಿ ರಸ್ತೆಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಲಾಯಿತು.