<p><strong>ಚನ್ನಪಟ್ಟಣ:</strong> ‘ಜಾನಪದ ಕಲಾವಿದರು ಹೊರ ದೇಶಗಳಲ್ಲಿ ಸಂಸ್ಕೃತಿ ಸೊಗಡು ಬಿತ್ತುತ್ತಿದ್ದು, ಅಲ್ಲಿ ನಮ್ಮ ಕಲೆ ಎಲ್ಲರ ಮೆಚ್ಚುಗೆಗೆ ಪಾತ್ರಾಗಿದೆ’ ಎಂದು ಸಾಹಿತಿ ಎಲೆಕೇರಿ ಶಿವರಾಂ ಪ್ರಶಂಸೆ ವ್ಯಕ್ತಪಡಿಸಿದರು.</p>.<p>ಪಟ್ಟಣದ ಮಂಟೇಸ್ವಾಮಿ ಮಠದಲ್ಲಿ ಘನನೀಲಿ ಸಿದ್ದಪ್ಪಾಜಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಾನಪದ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಜಾನಪದದ ಮೂಲ ಹುಡುಕಲು ಹೊರಟರೆ ದೊಡ್ಡ ಇತಿಹಾಸವೇ ಸಿಗುತ್ತದೆ. ಜನರಿಂದ ಹುಟ್ಟಿದ ಪದ ಜಾನಪದವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.</p>.<p>ಮಂಟೇಸ್ವಾಮಿ ಮಠದ ಅಧ್ಯಕ್ಷ ಸಿ.ಎಂ.ಶಿವರಾಮಯ್ಯ ಮಾತನಾಡಿ, ಜಾನಪದ ದೇವರೆನಿಸಿಕೊಂಡ ಸಿದ್ದಪ್ಪಾಜಿ, ಮಂಟೇಸ್ವಾಮಿ ಇಂದಿನ ವಾಸ್ತವಿಕ ಸನ್ನಿವೇಶದಲ್ಲೂ ತಮ್ಮ ಪವಾಡ, ಹಾಡುಗಳ ಮೂಲಕ ಜನಮಾನಸದಲ್ಲಿ ಬೇರು ಬಿಟ್ಟಿದ್ದಾರೆ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಸಿದ್ದರಾಜು ಮಾತನಾಡಿ, ಜಾನಪದ ಕಲಾವಿದರು ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಜಾನಪದಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಅವರಿಗೆ ಸರ್ಕಾರದಿಂದ ಸೂಕ್ತ ಧನಸಹಾಯ ಸಿಗಬೇಕಾಗಿದೆ ಎಂದು ತಿಳಿಸಿದರು.</p>.<p>ಮಂಟೇಸ್ವಾಮಿ ಮಠದ ಗುರು ಲಕ್ಷ್ಮಣ್ ಸಿಂಗ್ ಇದ್ದರು. ಜಾನಪದ ತಂಡಗಳಾದ ರಾಂಪುರ ಸಿದ್ದರಾಜು, ಸ್ವಾಮಿ ಮೆಣಸಿಗನಹಳ್ಳಿ, ಬೋರಮ್ಮ, ಎಚ್.ಪುಟ್ಟರಾಜು, ಕೆ.ಎಚ್.ಕುಮಾರ್, ಬಸವರಾಜು ಗುರುವಿನಪುರ, ನಿರಂಜನ್ ಮತ್ತು ತಸ್ಮಿಯ ಗೀತಗಾಯನ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ‘ಜಾನಪದ ಕಲಾವಿದರು ಹೊರ ದೇಶಗಳಲ್ಲಿ ಸಂಸ್ಕೃತಿ ಸೊಗಡು ಬಿತ್ತುತ್ತಿದ್ದು, ಅಲ್ಲಿ ನಮ್ಮ ಕಲೆ ಎಲ್ಲರ ಮೆಚ್ಚುಗೆಗೆ ಪಾತ್ರಾಗಿದೆ’ ಎಂದು ಸಾಹಿತಿ ಎಲೆಕೇರಿ ಶಿವರಾಂ ಪ್ರಶಂಸೆ ವ್ಯಕ್ತಪಡಿಸಿದರು.</p>.<p>ಪಟ್ಟಣದ ಮಂಟೇಸ್ವಾಮಿ ಮಠದಲ್ಲಿ ಘನನೀಲಿ ಸಿದ್ದಪ್ಪಾಜಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಾನಪದ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಜಾನಪದದ ಮೂಲ ಹುಡುಕಲು ಹೊರಟರೆ ದೊಡ್ಡ ಇತಿಹಾಸವೇ ಸಿಗುತ್ತದೆ. ಜನರಿಂದ ಹುಟ್ಟಿದ ಪದ ಜಾನಪದವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.</p>.<p>ಮಂಟೇಸ್ವಾಮಿ ಮಠದ ಅಧ್ಯಕ್ಷ ಸಿ.ಎಂ.ಶಿವರಾಮಯ್ಯ ಮಾತನಾಡಿ, ಜಾನಪದ ದೇವರೆನಿಸಿಕೊಂಡ ಸಿದ್ದಪ್ಪಾಜಿ, ಮಂಟೇಸ್ವಾಮಿ ಇಂದಿನ ವಾಸ್ತವಿಕ ಸನ್ನಿವೇಶದಲ್ಲೂ ತಮ್ಮ ಪವಾಡ, ಹಾಡುಗಳ ಮೂಲಕ ಜನಮಾನಸದಲ್ಲಿ ಬೇರು ಬಿಟ್ಟಿದ್ದಾರೆ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಸಿದ್ದರಾಜು ಮಾತನಾಡಿ, ಜಾನಪದ ಕಲಾವಿದರು ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಜಾನಪದಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಅವರಿಗೆ ಸರ್ಕಾರದಿಂದ ಸೂಕ್ತ ಧನಸಹಾಯ ಸಿಗಬೇಕಾಗಿದೆ ಎಂದು ತಿಳಿಸಿದರು.</p>.<p>ಮಂಟೇಸ್ವಾಮಿ ಮಠದ ಗುರು ಲಕ್ಷ್ಮಣ್ ಸಿಂಗ್ ಇದ್ದರು. ಜಾನಪದ ತಂಡಗಳಾದ ರಾಂಪುರ ಸಿದ್ದರಾಜು, ಸ್ವಾಮಿ ಮೆಣಸಿಗನಹಳ್ಳಿ, ಬೋರಮ್ಮ, ಎಚ್.ಪುಟ್ಟರಾಜು, ಕೆ.ಎಚ್.ಕುಮಾರ್, ಬಸವರಾಜು ಗುರುವಿನಪುರ, ನಿರಂಜನ್ ಮತ್ತು ತಸ್ಮಿಯ ಗೀತಗಾಯನ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>