ಡಿ.28 ರಂದು ಸಂಜೆ 5.30ಕ್ಕೆಸಮಾರೋಪ ನಡೆಯಲಿದೆ. ಮಾಜಿ ಶಾಸಕಕೆ.ಬಿ.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಮುಖಂಡರಾದ ಅಚ್ಚುತರಾವ್ ಪದಕಿ, ರಮಾ ವಿ.ಬೆಣ್ಣೂರ್ ಭಾಗವಹಿಸುವರು.ಪ್ರತಿದಿನ ಸಂಜೆ 7ಕ್ಕೆವೀಣಾನಾದ ಯಜ್ಞ ಕಾರ್ಯಕ್ರಮ ಆರಂಭವಾಗಲಿದೆ. 22ರಂದು ಎಸ್.ಜಿ.ಭಾಗ್ಯಲಕ್ಷ್ಮಿ ತಂಡ, 23ರಂದು ಭರದ್ವಾಜ್ ರಾಮನ್, 24ರಂದು ಬಿ.ಕೆ.ವಿಜಯಲಕ್ಷ್ಮಿ, 25ರಂದು ಸ್ಥಳೀಯ ಯುವವಾಣಿ ವಾಹಿನಿ ಹಾಗೂ ಲಲಿತಾ ಕೃಷ್ಣನ್, 26 ರಂದು ರಾಮನಾಥ ಅಯ್ಯರ್, 27ರಂದು ಶೋಭನಾ ಸ್ವಾಮಿನಾಥನ್ ತಂಡ ಕಾರ್ಯಕ್ರಮ ನಡೆಸಿಕೊಡಲಿವೆಎಂದು ವಿವರ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸುಮಂಗಲಾ ಸೀತಾರಾಮ್, ಸಹನಾ ರಮೇಶ್, ನಂದಿನಿ, ಸಮ್ಮಿತ್ಇದ್ದರು.