‘ಉತ್ತರ ಭಾರತದಲ್ಲಿ ಮುಸ್ಲಿಮರಲ್ಲಿ ಜಾತಿ ವ್ಯವಸ್ಥೆ ದೊಡ್ಡದಾಗಿದೆ. ಹಲವಾರು ಜಾತಿಗಳ ನಡುವೆ ತಾರತಮ್ಯವಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ ಎಂಬ ಮಾತು ಮುಸ್ಲಿಮರನ್ನೇ ವಿರೋಧಿಗಳಾಗಿ ಮಾಡಲಾಗುತ್ತಿದೆ. ಆದರೆ, ಅಲ್ಪಸಂಖ್ಯಾತರಕಷ್ಟಗಳು ಕುರಿತು ಸಾಚಾರ್ ಸಮಿತಿಯ ವರದಿಗೆ ಕಾಂಗ್ರೆಸ್ ಮಹತ್ವ ನೀಡಲೇ ಇಲ್ಲ. ಒಂದು ಕಡೆ ಬಾಬ್ರಿ ಮಸೀದಿಯ 204 ಎಕರೆ ಭಾಗ ಇಡೀ ಮುಸ್ಲಿಮರಸಾವು, ಬದುಕಿನ ಭಾಗ ಎಂಬಂತೆ ಮಾಡಲಾಗಿದೆ. ಇದೇ ವೇಳೆಯಲ್ಲಿ ವಕ್ಫ ಬಳಿ ಇರುವ ನೂರಾರು ಎಕರೆ ಆಸ್ತಿಗಳನ್ನು ಕೆಲವು ಮುಸ್ಲಿಂನಾಯಕರೇ ಕಬಳಿಸುತ್ತಿದ್ದಾರೆ. ಈ ಆಸ್ತಿಯನ್ನು ಮರಳಿ ವಶ ಮಾಡಿಕೊಂಡು ಸಮುದಾಯದ ಜನರ ಬದುಕನ್ನು ಅಭಿವೃದ್ಧಿ ಮಾಡುವ ಕೆಲಸಗಳು ನಡೆಯುತ್ತಿಲ್ಲ. ಮುಸ್ಲಿಂ ಪ್ರಗತಿಪರರು ಸಮುದಾಯದ ಹೊರಗೆ ನಿಂತು ಕೆಲಸ ಮಾಡುತ್ತಿದ್ದಾರೆ. ಆದರೆ, ಸಮುದಾಯದ ಒಳಗೆ ನಿಂತು ಮುಸ್ಲಿಮರಲ್ಲಿ ಅರಿವು ಮೂಡಿಸಿ, ಅವರ ಬದುಕನ್ನು ರೂಪಿಸಲು ಯತ್ನಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ’ ಎಂದರು.