ಮೇ 17ರಂದು ಬೆಟಗೇರಿಯ ಟೆಂಗಿನಕಾಯಿ ಬಜಾರ್ನಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಮೂಲಿಮನಿ ಅವರು ಗಜೇಂದ್ರಗಡದ ವ್ಯಕ್ತಿಯೊಬ್ಬನ ಬೈಕ್ ತಡೆದು, ಪ್ರಶ್ನಿಸಿದ್ದಾರೆ. ಆತ ನೇರವಾಗಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಕರೆ ಮಾಡಿ, ಮಾತನಾಡುವಂತೆ ಎಎಸ್ಐಗೆ ಕೊಟ್ಟಿದ್ದಾನೆ. ಈ ವೇಳೆ ಶಾಸಕರ ಜತೆಗೆ ಒರಟಾಗಿ ಮಾತನಾಡಿದ ಕಾರಣ ಅವರು ಮೇಲಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.