ಗದಗ: ‘ಮಾಜಿ ಮುಖ್ಯಮಂತ್ರಿ,ಶಾಸಕ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ಬಗ್ಗೆ ವಿರೋಧ ಪಕ್ಷದವರೂ ಹಲವು ಬಾರಿ ಹೊಗಳಿದ್ದಾರೆ. ಅದೇ ರೀತಿ, ಜನಾರ್ದನ ರೆಡ್ಡಿ ಕೂಡ ಬಿಎಸ್ವೈ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಹಾಗಂತ, ರೆಡ್ಡಿ ಅವರಿಗೆ ಯಡಿಯೂರಪ್ಪನವರ ಬೆಂಬಲ ಇದೆ ಎಂಬುದು ಸತ್ಯಕ್ಕೆ ದೂರವಾದ ಮಾತು’ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.